ಬಾಗಲಕೋಟೆ : ತಾಲೂಕಿನ ಕಂದಾಪೂರ ಪುನರ್ವಸತಿ ಕೇಂದ್ರದ ಶ್ರೀಮತಿ ಅಕ್ಷತಾ ಆನಂದ ಮಟ್ಯಾಳ ಅವರು ಸಿಎ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ.
ಬೆಂಗಳೂರಿನಲ್ಲಿ ಬಿಕಾಂ ಪದವಿ ಅಭ್ಯಾಸ ಮಾಡುತ್ತಾ ಸಿಎ ತರಬೇತಿ ಪಡೆದು ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಬಾಗಲಕೋಟೆಯ ಬಿವಿವಿ ಸಂಘದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ ಶಿಕ್ಷಣ ಪೂರೈಸಿದ್ದಾರೆ.
ಗ್ರಾಮೀಣ ಭಾಗದಿಂದ ಅಕ್ಷತಾ ಸಿಎ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದಿದ್ದಾರೆ. ನಾನು ಸಿಎ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೆ ನನ್ನ ಪತಿ ಹಾಗೂ ಮನೆಯ ಎಲ್ಲ ಸದಸ್ಯರು ಪ್ರೋತ್ಸಾಹ ನೀಡಿದ್ದರಿಂದ ನನ್ನ ಗುರಿ ಮುಟ್ಟಲು ಸಾಧ್ಯವಾಯಿತು ಎಂದು ಅಕ್ಷತಾ ತಿಳಿಸಿದ್ದಾರೆ.