News Karnataka Kannada
Wednesday, May 01 2024
ಬಾಗಲಕೋಟೆ

ಗೋಮಾಳ ಜಾಗ ದುರುಪಯೋಗ : ಗ್ರಾಮಸ್ಥರಿಂದ ಜಿಲ್ಲಾಧಿಕಾರಿಗೆ ಮನವಿ

New Project 2021 09 14t211421.450
Photo Credit :
ಬಾಗಲಕೋಟೆ: ಗೋಮಾಳ ಜಾಗ  ದುರುಪಯೋಗ ಪಡಿಸಿಕೊಂಡಿರುವ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವು ಕಂಪ್ಯೂಟರ್ ಆಪರೇಟರ್ ಮೇಲೆ ಕ್ರಮ  ತೆಗೆದುಕೊಳ್ಳಬೇಕು ಎಂದು ಬಾಗಲಕೋಟೆ ತಾಲೂಕಿನ ಶೀಗಿಕೇರಿ ಗ್ರಾಮಸ್ಥರು ಜಿಲ್ಲಾಡಳಿತ ಭವನ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಸಿದರು.
ಶೀಗಿಕೇರಿ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪ್ಯೂಟರ್ ಆಪರೇಟರ್ ಸಚಿವ ಶಿವರಾಮ ನಾಯಕ ಗ್ರಾಮದ ಸರ್ವೇ ನಂಬರ್ 124/1 ಎ ಸರ್ಕಾರಿ ಗೋಮಾಳ ಆಸ್ತಿಯಲ್ಲಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಅದರಲ್ಲಿ ನಿವೇಶನಗಳನ್ನು ಮಾಡಿ ಪ್ರತಿಯೊಬ್ಬರ ಹೆಸರಿನಲ್ಲಿ ಗಣಕೀಕೃತ ಉತಾರ ರೂಪಿಸಿ ಗೋಲಮಾಲ್ ಮಾಡಿದ್ದಾರೆ. ಈ ಹಿಂದೆ ಹಲಾವರು ಬಾರಿ ಅಕ್ರಮ ಎಸಗುತ್ತಾ ಬಂದಿದ್ದಾನೆ. ಕೂಡಲೇ ತನಿಖೆ ನಡೆಸಿ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಗ್ರಾಮಸ್ಥರಾದ ರತ್ನವ್ವ ಬೋಕನಕೇರ, ಶಂಕ್ರವ್ವ ಹೆಬ್ಬನವನರ, ರೇಣವ್ವ ಮಾರಂಡಗಿ, ರತ್ನವ್ವ ಶೆಬ್ಬನವರ, ಶಾರದಾ ಕಟಗೇರಿ, ಶೈಲಾ ಮೊರಟಗಿ, ಶಂಕ್ರಪ್ಪ ಬಳಿಗಾರ ಇತರರು ಇದ್ದರು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು