ಬಾಗಲಕೋಟೆ : ಕಾಂಗ್ರೆಸ್ ಅಧಿಕಾರ ಕಳೆದುಕೊಂಡು, ಅಸ್ತಿತ್ವಕ್ಕೆ ಕಳೆದಕೊಂಡ ಹಿನ್ನಲೆ ನಿರಂತರವಾಗಿ ಅಪಪ್ರಚಾರ ಮಾಡುತ್ತಾ, ಸುಳ್ಳು ಸುದ್ದಿ ಮಾಡುತ್ತಿದೆ ಎಂದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲು ಹೇಳಿದ್ದಾರೆ
ಅವರು ಬಾಗಲಕೋಟೆ ನಗರದಲ್ಲಿ ಮಾತನಾಡುತ್ತಾ, ಕಾಂಗ್ರೆಸ್ ಪಕ್ಷದವರಿಗೆ ಶಾಶ್ವತ ವಾಗಿ ನಿರುದ್ಯೋಗ ಆಗುವ ಭಯ ಇದೆ. ಈ ಹಿನ್ನಲೆಯಲ್ಲಿ ದಾಖಲೆ ಇಲ್ಲದೆ ಆರೋಪ ಮಾಡುತ್ತಿದ್ದಾರೆ ಎಂದರು.
ಸುಳ್ಳು ಆರೋಪ ಮಾಡಿದರು ಸಹ ಸಿಎಂ ಅವರು ದೂರು ಬಂದಾಗ ನಿರ್ಲಕ್ಷ್ಯ ಮಾಡದೆ ಅದರ ಬಗ್ಗೆ ಪಾರದರ್ಶಕ ವಾಗಿ ಕಾನುನು ತೆಗೆದುಕೊಳ್ಳುವ ಪ್ರಯತ್ನ ದಲ್ಲಿ ಇದ್ದಾರೆ.ಹಿಂದೆ ಇದೇ ಕಾಂಗ್ರೆಸ್ ಸರ್ಕಾರ ಇದ್ದಾಗ,ಸರ್ಕಾರದ ಮೇಲೆ ಆರೋಪ ಬಂದಿತ್ತು.
ಎಲ್ಲಿ ಕ್ರಮ ತೆಗೆದುಕೊಂಡರು,ಎಲ್ಲಿ ತನಿಖೆಗೆ ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದ ಕಟಿಲ್,ಅವರು,ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಭಯ ಕಾಡುತಿದೆ.ಬಿಜೆಪಿ ಪಕ್ಷವು ಎಲ್ಲಾ ಉಪ ಚುನಾವಣೆಯಲ್ಲಿ ಹಾಗೂ ಮಹಾನಗರ ಪಾಲಿಕೆ ಯಲ್ಲಿ, ಅಭೂತಪೂರ್ವ ಗೆಲುವು ಸಾಧಿಸಿದೆ ಇದೇ ರೀತಿಯಾಗಿ ಗೆಲುವು ಸಾಧಿಸುತ್ತಾ ಹೋದರೆ,ಶಾಶ್ವತ ವಾಗಿ ನಿರುದ್ಯೋಗ ಆಗುತ್ತೇನೆ ಎಂದು ಸುಳ್ಳು ಸುದ್ದಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು