News Karnataka Kannada
Sunday, April 28 2024
ಬಾಗಲಕೋಟೆ

ಒಬ್ಬನನ್ನು ರಕ್ಷಿಸಲು ಹೋಗಿ ನಾಲ್ವರ ದುರ್ಮರಣ

Dead
Photo Credit :
ಬಾಗಲಕೋಟೆ: ನಾರಾಯಣಪುರ ಡ್ಯಾಂ ಹಿನ್ನೀರಿನಲ್ಲಿ ನಾಲ್ವರು ಮೃತಪಟ್ಟ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರು ಬಳಿ ಓರ್ವನನ್ನು ರಕ್ಷಿಸಲು ಹೋಗಿ ನಾಲ್ವರು ಮೃತಪಟ್ಟಿದ್ದಾರೆ. ಶಿವಪ್ಪ ಅಮಲೂರು, ಯಮನಪ್ಪ ಅಮಲೂರು(45), ಶರಣಗೌಡ ಬಿರಾದರ್(30) ಮತ್ತು ಪರಶು ಎಂಬುವವರು ಮೃತ ದುರ್ದೈವಿಗಳು.

ಮಾನಸಿಕ ಅಸ್ವಸ್ಥ ಶಿವಪ್ಪ ಅಮಲೂರು ಎಂಬುವವರು ನದಿಯಲ್ಲಿ ಮುಳುಗಿದ್ದಾರೆ. ಈ ವೇಳೆ ಶಿವಪ್ಪನ ಮೃತದೇಹ ಹುಡುಕಲು ಶಿವಪ್ಪ ಅಮಲೂರು ಪುತ್ರ ಯಮನಪ್ಪ ಅಮಲೂರು ಮತ್ತು ಶಿವಪ್ಪ ಅಮಲೂರು ಅಳಿಯ ಶರಣಗೌಡ ಬಿರಾದರ್ ಸೇರಿ 11 ಜನ ಬೋಟ್​ನಲ್ಲಿ ತೆರಳಿದ್ದಾರೆ. ಆಗ ವಿದ್ಯುತ್ ಸ್ಪರ್ಶಿಸಿ ಶಿವಪ್ಪನ ಪುತ್ರ, ಅಳಿಯ ಮತ್ತು ಇವರ ಜೊತೆಗೆ ಇವರನ್ನು ಕರೆದೊಯ್ದಿದ್ದ ಬೋಟ್ ಆಪರೇಟರ್ ಪರಶು ಸೇರಿ ಮೂವರು ಮೃತಪಟ್ಟಿದ್ದಾರೆ. ಅದೃಷ್ಟವಷಾತ್​ ಬೋಟ್​ನಲ್ಲಿದ್ದ ಇತರೆ 8 ಜನರು ಪಾರಾಗಿದ್ದಾರೆ. ಮೃತರು ವಿಜಯಪುರ ಜಿಲ್ಲೆ ತಾಳಿಕೋಟಿ ತಾಲ್ಲೂಕಿನ ಹರನಾಳ ಮೂಲದವರು ಎಂದು ತಿಳಿದು ಬಂದಿದೆ.

ಶಿವಪ್ಪ ಅಮಲೂರರ ಶವ ಹುಡುಕೋದಕ್ಕೆ ಬೋಟ್ ಮೂಲಕ ಹೋದ ಮಗ, ಅಳಿಯ, ಬೋಟ್ ಆಪರೇಟರ್ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸ್ಥಳಕ್ಕೆ ಹುನಗುಂದ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಕಾರ್ಯಾಚರಣೆ ನಡೆಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು