News Karnataka Kannada
Sunday, May 05 2024
ರಾಮನಗರ

ಗುಡ್ಡೆ ಅವ್ವೇರಹಳ್ಳಿ ಬಳಿ ಒಂಟಿ ಸಲಗ ಸೆರೆ: ಅರಣ್ಯ ಇಲಾಖೆ ಯಶಸ್ವಿ ಕಾರ್ಯಾಚರಣೆ

Elephant Channapatna 29 6 21
Photo Credit :

ಚನ್ನಪಟ್ಟಣ : ತಾಲೂಕಿನ ಗುಡ್ಡೆ ಅವ್ವೇರಹಳ್ಳಿ ಗ್ರಾಮದ ಬಳಿ ಬೀಡುಬಿಟ್ಟಿದ್ದ ಒಂಟಿ ಸಲಗವನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಅವ್ವೇರಹಳ್ಳಿ ಗುಡ್ಡದ ಅರಣ್ಯಪ್ರದೇಶದಲ್ಲಿ ಸೋಮವಾರ ಬೆಳಗ್ಗೆ ಒಂಟಿ ಸಲಗ ಕಾಣಿಸಿಕೊಂಡಿತ್ತು. ಈ ಬಗ್ಗೆ ಸ್ಥಳೀಯರು ಅರಣ್ಯ ಮತ್ತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದರು.
ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಅನೆ ಸೆರೆ ಹಿಡಿಯಲು ಕಾರ್ಯಾಚರಣೆ ಕೈಗೊಂಡರು. ಒಂಟಿಸಲಗವನ್ನು ಸೆರೆಹಿಡಿಯುವ ಉದ್ದೇಶ ದಿಂದ ದುಬಾರೆ ಕ್ಯಾಂಪ್‌ನಿಂದ ನಾಲ್ಕು ಪಳಗಿದ ಆನೆಗಳನ್ನು ಸ್ಥಳಕ್ಕೆ ಕರೆತರಲಾಗಿತ್ತು. ಅರಿವಳಿಕೆ ತಜ್ಞರ ಸಹಾಯ ಹಾಗೂ ಇಲಾಖೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ದಲ್ಲಿ ಒಂಟಿಸಲಗವನ್ನು ಹಿಡಿಯಲಾಯಿತು. ಕೆಲಗಂಟೆ ನಡೆದ ಕಾರ್ಯಾಚರಣೆ ಯಶಸ್ವಿಯಾಗಿ ನೇರವೇರಿತು. ಸೆರೆಸಿಕ್ಕ ಒಂಟಿ ಸಲಗವನ್ನು ಕ್ರೇನ್‌ನ ಸಹಾಯದಿಂದ ಲಾರಿಯಲ್ಲಿ ಹಾಕಿಕೊಂಡು ದುಬಾರೆ ಆನೆಗಳ ಕ್ಯಾಂಪ್‌ಗೆ ರವಾನಿಸಲಾಯಿತು. ಈ ಬಗ್ಗೆ ಪತ್ರಿಕೆಗೆ ತಿಳಿಸಿರುವ ವಲಯ ಅರಣ್ಯಾಧಿಕಾರಿ ದಿನೇಶ್, ಕಾವೇರಿ ವನ್ಯಜೀವಿಧಾಮದಿಂದ ಸುಮಾರು 25 ವರ್ಷದ ಒಂಟಿಸಲಗ ಬಂದಿದೆ. ಭಾನುವಾರ ಸಂಜೆ ಈ ಸಲಗ ಇಗ್ಗಲೂರು ಬಳಿ ಕಾಣಿಸಿಕೊಂಡಿತ್ತು. ರಾತ್ರಿಯಾದ ಕಾರಣ ಇದರ ಸುಳಿವು ಪತ್ತೆಯಾಗಿರಲಿಲ್ಲ.
ಸೋಮವಾರ ಬೆಳಗ್ಗೆ ಅವ್ವೇರಹಳ್ಳಿ ಗುಡ್ಡೆಯಲ್ಲಿ ಇರುವ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಕಾರ್ಯಾಚರಣೆ ನಡೆಸಿ ಒಂಟಿ ಸಲಗವನ್ನು ಸೆರೆಹಿಡಿಯಲಾಯಿತು. ರಾತ್ರಿಯಿಡೀ ಓಡಾಟ ನಡೆಸಿರುವ ಈ ಅನೆಯಿಂದ ಯಾವುದೇ ಅನಾಹುತ ವರದಿಯಾಗಿಲ್ಲ ಎಂದು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಸಿಎಫ್ ಹೀರೆಲಾಲ್, ರಾಮನಗರ ಡಿಸಿಎಫ್ ದೇವರಾಜು, ಮಂಡ್ಯ ಡಿಸಿಎಫ್ ರವಿಶಂಕರ್, ವೈದ್ಯರಾದ ಮುಜಾಹಿದ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು. ಕಾರ್ಯಾಚರಣೆ ಮುಗಿಯುವವರೆಗೂ ಡಿವೈಎಸ್‌ಪಿ ಕೆ.ಎನ್.ರಮೇಶ್ ಹಾಗೂ ಎಂ.ಕೆ,ದೊಡ್ಡಿ ಪಿಎಸ್‌ಐ ಸದಾನಂದ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು