ಬೆಂಗಳೂರು ; ಕಳೆದ ಹತ್ತು ದಿನಗಳಿಂದ ರಾಜ್ಯ ಪ್ರವಾಸದಲ್ಲಿದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ರಾಜ್ಯ ಪ್ರವಾಸ ಮುಗಿಸಿ ಇಂದು ದೆಹಲಿಗೆ ವಾಪಸ್ ತೆರಳಿದರು.
ಇಂದು ಬೆಳಗ್ಗೆ 9.30ಕ್ಕೆ ಎಚ್ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಉಪರಾಷ್ಟ್ರಪತಿಗಳು ದೆಹಲಿಗೆ ತೆರಳಿದರು. ಈ ಸಂದರ್ಭದಲ್ಲಿ ಅವರನ್ನು ಬೀಳ್ಕೊಟ್ಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ವೆಂಕಯ್ಯ ನಾಯ್ಡು ಅವರಿಗೆ ಒಂದು ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು. ಸರ್ಕಾರಿ ಕಾರ್ಯಕ್ರಮದಲ್ಲಿ ಹೂಗುಚ್ಛ ನೀಡುವ ಪದ್ದತಿಗೆ ಸಿಎಂ ಬೊಮ್ಮಾಯಿ ತಿಲಾಂಜಲಿ ಹಾಡಿದ್ದಾರೆ. ಹಾರ ತುರಾಯಿ ಬದಲಾಗಿ ಪುಸ್ತಕಗಳನ್ನು ನೀಡಬೇಕು ಎಂಬ ಆದೇಶ ನೀಡಿದ್ದರು. ಅದರಂತೆ ಹತ್ತು ದಿನಗಳ ರಾಜ್ಯ ಪ್ರವಾಸಕ್ಕೆ ಆಗಮಿಸಿದ್ದ ವೆಂಕಯ್ಯ ನಾಯ್ಡು ಅವರಿಗೆ ಸಿಎಂ ಪ್ರೈಡ್ ಆಂಡ್ ಪ್ರಿಜುಡಿಸ್ ಎಂಬ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರೆ.
10 ದಿನ ರಾಜ್ಯ ಪ್ರವಾಸದಲ್ಲಿದ್ದ ಉಪರಾಷ್ಟ್ರಪತಿ ಇಂದು ದೆಹಲಿಗೆ ವಾಪಸ್
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.