ಹುಬ್ಬಳ್ಳಿ: ಹುಬ್ಬಳ್ಳಿ ನಗರದ ಪ್ರಮುಖ ಸ್ಥಳಗಳಿಗೆ ದಾರ್ಶನಿಕರ ಹೆಸರನ್ನು ನಾಮಕರಣ ಮಾಡಲಾಗಿದೆ. ಈ ಪ್ರದೇಶದಲ್ಲಿ ವಾಸಿಸಿ ಇಲ್ಲಿನ ಜನರಿಗೆ ಜೀವನ ಮಾಡಲು ಮಾರ್ಗದರ್ಶನ ನೀಡಿದ್ದ ದಾರ್ಶನಿಕರ ಹೆಸರನ್ನು ನಾಮಕರಣ ಮಾಡಲಾಗಿದೆ.
ಹುಬ್ಬಳ್ಳಿಯ ರೈಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣ ಎಂದು ನಾಮಕರಣ ಮಾಡಲಾಗಿತ್ತು, ಈಗ ಉಣಕಲ್ ಕೆರೆಗೆ ಚನ್ನಬಸವಸಾಗರ ಎಂದು ಹೆಸರಿಡಲಾಗಿದೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ನಡುವೆ ಇರುವ ಉಣಕಲ್ ಪ್ರದೇಶದಲ್ಲಿ 750 ಎಕರೆಗಳಲ್ಲಿ ಹರಡಿರುವ ಉಣಕಲ್ ಕೆರೆಯಿದ್ದು, ಅತ್ಯುತ್ತಮ ಪಿಕ್ನಿಕ್ ತಾಣಗಳಲ್ಲಿ ಒಂದಾಗಿದೆ. ಪ್ರತಿದಿನ ನೂರಾರು ಜನರನ್ನು ಆಕರ್ಷಿಸುತ್ತದೆ.
ಹಿಂದೆ, ಹುಬ್ಬಳ್ಳಿ ನಗರಕ್ಕೆ ಈ ಜಲಮೂಲದಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿತ್ತು, ಮಲಪ್ರಭಾ ನದಿ ನೀರಿನ ಯೋಜನೆ ಪ್ರಾರಂಭವಾದ ನಂತರ, ಉಣಕಲ್ ಸರೋವರವನ್ನು ಪಿಕ್ನಿಕ್ ತಾಣವಾಗಿ ಅಭಿವೃದ್ಧಿ ಮಾಡಲಾಯಿತು.