ಚಿಕ್ಕಮಗಳೂರು: ಈ ಬಾರಿ ಚಿಕ್ಕಮಗಳೂರು ವಿದಾನಸಭಾ ಕ್ಷೇತ್ರದಲ್ಲಿ ಜೆ ಡಿ ಎಸ್ ಅಭ್ಯರ್ಥಿ ಗೆಲುವು ಸಾಧಿಸಿದರೆ, ಹೆಚ್ ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದರೆ ಕೇವಲ ಮೂರು ತಿಂಗಳಿನಲ್ಲಿ ಏನೇ ಆದರೂ ಬಿಡದೇ ಕರಗಡ ಕುಡಿಯುವ ನೀರಿನ ಕಾಮಗಾರಿಯನ್ನು ಪೂರ್ಣಗೊಳಿಸಿ ಬಯಲು ಸೀಮೆಗೆ ನೀರು ಹರೀಸೇ ತೀರುತ್ತೇನೆ ಎಂದು ಮಾಜಿ ಶಾಸಕ ಎಸ್ ಎಲ್ ಧರ್ಮೇಗೌಡ ಘೋಷಿಸಿದರು.
ಕಡೂರು ತಾಲ್ಲೂಕಿನ ಸಖರಾಯಪಟ್ಟಣದಲ್ಲಿ ನಡೆದ ಬಯಲು ಸೀಮೆ ಭಾಗದ ಜೆ ಡಿ ಎಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಣ, ಹೆಂಡದಿಂದ ಈ ಬಾರಿ ಬಿ ಜೆ ಪಿ ಚುನಾವಣೆ ಗೆಲ್ಲಲು ಸಾದ್ಯವಿಲ್ಲ, ನಮ್ಮ ತಂದೆ ಲಕ್ಷ್ಮಯ್ಯನವರು ಚುನಾವಣೆಗೆ ನಿಂತಿದ್ದಾಗೆ ಜಾತಿ ಇಲ್ಲ, ಹಣ ಇಲ್ಲಾ, ಇವರೆಲ್ಲಿ ಗೆಲ್ಲುತ್ತಾರೆ ಎಂದು ಅಪಹಾಸ್ಯ ಮಾಡಿದ್ದರು, ನಾನು ಚುನಾವಣೆಗೆ ಸ್ಪರ್ದಿಸೀದಾಗಲು ಇವನೆಲ್ಲಿ ಎಂ ಎಲ್ ಎ ಆಗುತ್ತಾನೆ ಎಂದು ನಗಾಡಿದ್ದರು ಆದರೆ ನಾನು ಮತ್ತು ನನ್ನ ತಂದೆ ಹಣವಿಲ್ಲದೆ ಗೆದ್ದು ಬಂದೆವು, ಅದೇ ರೀತಿ ಹಣ ಹೆಂಡವಿಲ್ಲದೆ ನಮ್ಮ ಅಭ್ಯರ್ಥಿಯು ಈ ಬಾರಿ ಗೆಲ್ಲುತಾರೆ ಎಂದು ಹೇಳಿದರು ರಾಜ್ಯ ಉಪಾದ್ಯಕ್ಷ ಹೆಚ್ ಹೆಚ್ ದೇವರಾಜ್ ಮಾತನಾಡಿದರು.
ಕರಗಡ ಕುಡಿಯುವ ನೀರಿನ ಯೋಜನೆ ಕಾಮಗಾರಿಯಲ್ಲಿ ಕ್ಷುಲ್ಲಕ ರಾಜಕಾರಣ ಮತ್ತು ಹಣ ಹೊಡೆಯುವ ಮೂಲಕ ಕಾಂಗ್ರೇಸ್, ಬಿ ಜೆ ಪಿ ಶಾಸಕರು ಬಯಲು ಸೀಮೆಯ ಜನರಿಗೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದರು.
ಹದಿನೈದು ವರ್ಷಗಳಿಂದ ಬಯಲು ಸೀಮೆಯ ಜನರಿಗೆ ಕುಡಿಯಲು ನೀರು ಒದಗಿಸದ ಶಾಸಕ ಸಿ ಟಿ ರವಿಯವರು ಜೆ ಡಿ ಎಸ್ ಅಭ್ಯರ್ಥಿ ಬಿ ಹೆಚ್ ಹರೀಶ್ ಅವರು ಟ್ಯಾಂಕರ್ ಗಳಲ್ಲಿ ನೀರು ವಿತರಿಸಲು ಆರಂಬಿಸಿದ ನಂತರ ಎಚ್ಚೆತ್ತು ಇದೀಗ ಅವರೂ ಟ್ಯಾಂಕರ್ ಗಳಿಗೆ ಬಿ ಜೆ ಪಿ ಬ್ಯಾನರ್ ಹಾಕಿಕೊಂಡು ನೀರು ವಿತರಿಸಲು ಮುಂದಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಚುನಾವಣೆಯಲ್ಲಿ ಸೋಲುವ ಭಯದಿಂದ ಶಾಸಕ ಸಿ ಟಿ ರವಿಯವರಿಗೆ ಇದೀಗ ಬಿ ಎಸ್ ಯಡಿಯೂರಪ್ಪ ನೆನಪಾಗಿದ್ದಾರೆ ಅದಕ್ಕಾಗಿ ತಮ್ಮ ರಾಜಕೀಯ ಗುರು ಅನಂತ ಕುಮಾರ್ ಭಾವಚಿತ್ರವನ್ನು ಬಿಟ್ಟು ರವಿಯವರು ಯಡಿಯೂರಪ್ಪನವರ ಭಾವ ಚಿತ್ರವನ್ನು ಹಾಕುತ್ತಿದ್ದಾರೆ ಎಂದು ಟೀಕಿಸಿದರು,