News Karnataka Kannada
Friday, May 10 2024
ಕರ್ನಾಟಕ

ಶಾಸಕ ಇಕ್ಬಾಲ್ ಗೆ ರವಿ ಪೂಜಾರಿ ಹೆಸರಿಂದ ಬೆದರಿಕೆ ಕರೆ

Photo Credit :

ಶಾಸಕ ಇಕ್ಬಾಲ್ ಗೆ ರವಿ ಪೂಜಾರಿ ಹೆಸರಿಂದ ಬೆದರಿಕೆ ಕರೆ

ಕೊಪ್ಪಳ: ಭೂಗತ ಪತಾಕಿ ರವಿ ಪೂಜಾರಿ ಎಂದು ಹೆಸರು ಹೇಳಿ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಗೆ ಬೆದರಿಕೆಯೊಡ್ಡಿರುವ ಬಗ್ಗೆ ದೂರು ದಾಖಲಾಗಿದೆ.

ಶಾಸಕರ ಆಪ್ತ ಸಹಾಯಕ ಶಿವಾನಂದ್ ಅವರು ಈ ಕುರಿತು ದೂರು ನೀಡಿದ್ದಾರೆ. ಆತ ಕರೆ ಮಾಡಿದಾಗ ಶಾಸಕರ ಜತೆ ತೀವ್ರ ಕೋಪದಲ್ಲಿ ಮಾತನಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾನೆ.

ಅದಲ್ಲದೆ ‘ಹಿಂದೂಗಳ ವಿರುದ್ಧ ಮಾಧ್ಯಮಗಳ ಜತೆ ಮಾತನಾಡಬಾರದು. ಒಂದು ವೇಳೆ ಮಾತನಾಡಿದರೆ ನನ್ನ ಜನರು ಗುಂಡು ಹೊಡೆದು ಸಾಯಿಸುತ್ತಾರೆ’ ಎಂದು ಎಚ್ಚರಿಸಿದ್ದಾನೆ. ಇದೀಗ ಮಾತನಾಡಿರುವ ಆಡಿಯೋ ಎಲ್ಲೆಡೆ ವೈರಲ್ ಆಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅನೂಪ್ ಎ. ಶೆಟ್ಟಿ ಅವರು ಪ್ರಕರಣ ದಾಖಲಾಗಿಸಿದ್ದಾರೆ. ‘ಘಟನೆಯ ಬಗ್ಗೆ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ. ಆಡಿಯೋ ಇರುವುದರಿಂದ ಅದನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿ ಅದು ರವಿಪೂಜಾರಿಯದ್ದೇ ಎಂದು ಖಚಿತಪಡಿಸಬೇಕಿದೆ. ವಿದೇಶದಿಂದ ಬರುವ ಕರೆಗಳ ಬಗ್ಗೆಯೂ ಪರಿಶೀಲನೆ ನಡೆಯಬೇಕು’ ಎಂದು ಅವರು ತಿಳಿಸಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು