ಸಕಲೇಶಪುರ: ರೈಲು ಡಿಕ್ಕಿ ಹೊಡೆದ ಪರಿಣಾಮ ಆನೆಯೊಂದು ಸಾವನ್ನಪ್ಪಿರುವ ಘಟನೆ ಸೋಮವಾರ ಮುಂಜಾನೆ ಸಕಲೇಶಪುರ ತಾಲ್ಲೂಕು ಕಾಕನಮನೆ ಬಳಿ ನಡೆದಿದೆ.
ಆನೆ ಆಹಾರ ಅರಸಿ ಬೇಲೂರು ಅಥವಾ ಚಿಕ್ಕಮಗಳೂರು ಕಡೆಯಿಂದ ಈ ಪ್ರದೇಶದ ಕಡೆ ಬಂದಿರಬಹುದು ಎಂದು ಶಂಕಿಸಲಾಗಿದೆ.
ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಘಾಯಗೊಂಡ ಆನೆ ಕೆಲಹೊತ್ತಿನಲ್ಲೇ ಸ್ಥಳದಲ್ಲೇ ಮೃತಪಟ್ಟಿದೆ. ಇದರೊಂದಿಗೆ ಕಳೆದ 6 ತಿಂಗಳ ಅವಧಿಯಲ್ಲಿ ರೈಲಿಗೆ ಸಿಲುಕಿ ಒಟ್ಟು 3 ಆನೆಗಳು ಸಾವನ್ನಪ್ಪಿದೆ.
ಜೂ. 3ರಂದು ಸಕಲೇಶಪುರ ತಾಲ್ಲೂಕು ಯಡಕುಮರಿ ಬಳಿ ರೈಲಿಗೆ ಸಿಲುಕಿ 2 ಮರಿ ಆನೆಗಳು ಸಾವನ್ನಪ್ಪಿದವು.