ಶಿವಮೊಗ್ಗ : ಪ್ರೀತಿ ನಿರಾಕರಿಸಿದ ಯುವತಿಯ ಕುತ್ತಿಗೆಗೆ ವೇಲ್ ಬಿಗಿದು ಕೊಲೆ ಮಾಡಿ ಕಾಡಿನಲ್ಲಿ ಎಸೆದು ಬಳಿಕ ತಾನೂ ವಿಷಕುಡಿದ ಭಗ್ನಪ್ರೇಮಿಯೂ ಚಿಕಿತ್ಸೆ ಫಲಕಾರಿಯಾಗದೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಗಿನಜಾವ ಮೃತಪಟ್ಟಿದ್ದಾನೆ.
ಹೊಸನಗರ ತಾಲೂಕಿನ ತಳಲೆ ಗ್ರಾಮದ ಶಿವಮೂರ್ತಿ(21) ಮೃತಪಟ್ಟಿದ್ದು, ಈತ ಸಾಗರ ತಾಲೂಕಿನ ಬಾನುಕುಳಿಯ ಕವಿತಾ(21) ಎಂಬುವ ನರ್ಸಿಂಗ್ ವಿದ್ಯಾರ್ಥಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.
ಈಕೆ ಬೋರೊಬ್ಬನನ್ನು ಪ್ರೀತಿಸುತ್ತಿದ್ದು ತನ್ನ ಪ್ರೀತಿ ನಿರಾಕರಿಸಿದ್ದಾಳೆಂದು ಭಾವಿಸಿ ಶಿವಮೂರ್ತಿ ಬುಧವಾರ ಹಾಸ್ಟೆಲ್ ನಿಂದ ಕವಿತಾಳನ್ನು ತನ್ನ ಸ್ವಗ್ರಾಮ ತಳಲೆ ಬಳಿಯ ನೇರಲಿಗೆ ಕಾಡಿಗೆ ಕರೆದುಕೊಂಡು ಹೋಗಿದ್ದ.ಅಲ್ಲಿ ಇಬ್ಬರಿಗೂ ವಾಗ್ವಾದ ನಡೆದು ವೇಲ್ ಬಿಗಿದು ಆಕೆಯನ್ನು ಕೊಲೆ ಮಾಡಿ ಬಳಿಕ ತಾನೂ ವಿಷ ಕುಡಿದು ಊರಿಗೆ ಹೋಗಿದ್ದ.
ಇದನ್ನು ಗಮನಿಸಿದ ಮನೆಯವರು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ನಡೆದ ಘಟನೆ ಬಗ್ಗೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದ ಆರೋಪಿ ಮೃತಪಟ್ಟಿದ್ದಾನೆ. ವಿದ್ಯಾರ್ಥಿನಿ ಹಾಸ್ಟೆಲ್ ನಿಂದ. ನಾಪತ್ತೆಯಾಗುತ್ತಿದ್ದಂತೆ ಶಿವಮೊಗ್ಗದ ತುಂಗಾ ನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.