ಬಾಗಲಕೋಟೆ : ದೇವರ ದರ್ಶನಕ್ಕೆ ಬಂದಿದ್ದ ಒಂದೇ ಕುಟುಂಬದ ಮೂವರು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಶಿವಯೋಗ ಮಂದಿರದಲ್ಲಿ ನಡೆದಿದೆ.
ಮಲಪ್ರಭಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದವರನ್ನು ವಿಶ್ವನಾಥ್ ಮಾವಿನಮರದ 40 ವರ್ಷ, ಅತ್ತಿಗೆ (ಮೃತ ವಿಶ್ವನಾಥನ ಸಹೋದರನ ಪತ್ನಿ) ಶ್ರೀದೇವಿ ಮಾವಿನಮರದ 32 ವರ್ಷ, ಹಾಗೂ (ವಿಶ್ವನಾಥನ ಮಗಳು )ನಂದಿನಿ ಮಾವಿನಮರದ 12 ವರ್ಷ ಎಂದು ಗುರುತಿ ಸಲಾಗಿದೆ. ಮೃತರು ಗದಗ ಜಿಲ್ಲೆಯ ರೋಣ ಪಟ್ಟಣ ದಲ್ಲಿ ವಾಸವಾಗಿದ್ದರು ಎಂದು ತಿಳಿಸಿದು ಬಂದಿದೆ.
ಒಂದೇ ಕುಟುಂಬದ 8 ಜನರು ಬಾದಾಮಿಯ ಬನಶಂಕರಿ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದು ಬಳಿಕ ಬಾದಾಮಿ ತಾಲೂಕಿನ ಶಿವಯೋಗ ಮಂದಿರಕ್ಕೆ ತೆರಳಿದ್ದರು. ಈ ಬಗ್ಗೆ ವೇಳೆ ದೇವರ ದರ್ಶನ ಪಡೆದು ನಂತರ ಶಿವಯೋಗಮಂದಿರದ ಬಳಿ ಇರುವ ಮಲಪ್ರಭಾ ನದಿ ದಡದಲ್ಲಿ ಕುಳಿತು ಉಪಹಾರ ಸೇವಿಸಿದ್ದಾರೆ.