News Karnataka Kannada
Monday, May 06 2024
ಕರ್ನಾಟಕ

ಮುಂಧಿನ ಬಾರಿ ಬಾದಾಮಿ ಯಿಂದಲೇ ಸ್ಪರ್ದೆ ; ಸಿದ್ದರಾಮಯ್ಯ

Siddaramaiah Bang 17 6 21 No 176218 Newsk 3471785224
Photo Credit :

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾನು ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸುವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಸಿದ್ದರಾಮಯ್ಯ ಅವರು ಬೇರೆ ಕ್ಷೇತ್ರದಿಂದ ನಿಲ್ಲುತ್ತಾರೆ ಎಂಬ ಸುದ್ದಿ ಬಂದ ಹಿನ್ನೆಲೆಯಲ್ಲಿ ಬಾದಾಮಿ ಕ್ಷೇತ್ರದಿಂದ ಬೆಂಗಳೂರಿಗೆ ಬಂದ ಹಲವರು ಶಿವಾನಂದ ವೃತ್ತ ಸಮೀಪ ಸರ್ಕಾರಿ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನ ಭೇಡಿ ಮಾಡಿ, ಬಾದಾಮಿಯಿಂದಲೇ ಸ್ಪರ್ಧಿಸಬೇಕು ಎಂದು ಪಟ್ಟು ಹಿಡಿದರು. ಆ ವೇಳೆ ಮಾತನಾಡಿದ ಸಿದ್ದು, ನಾನೇನಾದ್ರೂ ಬಾದಾಮಿಯಿಂದ ಚುನಾವಣೆಗೆ ಸ್ಪರ್ಧಿಸಲ್ಲ ಅಂದಿದ್ದೀನಾ? ಅಭಿಮಾನದಿಂದ ಕೆಲವರು ಬೇರೆ ಕಡೆ ಸ್ಪರ್ಧಿಸಿ ಎಂದು ಕರೆಯುತ್ತಾರೆ ಅಷ್ಟೆ. ನಾನು ಹಲವು ಕೆಲಸ ಮಾಡಿರಬಹುದು. ಒಬ್ಬ ಶಾಸಕನಾಗಿಯಷ್ಟೇ ಮಾಡಿದ್ದೇನೆ. ಅದರಲ್ಲಿ ದೊಡ್ಡಸ್ಥಿಕೆಯೇನೂ ಇಲ್ಲ. ಚುನಾವಣೆಗೆ ಇನ್ನೂ ಒಂದು ವರ್ಷ 10 ತಿಂಗಳು ಬಾಕಿಯಿದೆ. ನಾನು ಅಸೆಂಬ್ಲಿಯಲ್ಲೂ ಹೇಳಿದ್ದೇನೆ. ಬಾದಾಮಿಯಿಂದಲೇ ಸ್ಪರ್ಧಿಸುವುದಾಗಿ ಅವತ್ತು ಹೇಳಿದ ಮಾತೇ ಇವತ್ತಿಗೂ ಇದೆ. ನಾನು ಬಾದಾಮಿ ಶಾಸಕ. ನಿಮ್ಮ ಇಚ್ಛೆಯಂತೆ ಬಾದಾಮಿಯಲ್ಲೇ ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಕೊಪ್ಪಳ, ಕೋಲಾರ, ಚಾಮರಾಜಪೇಟೆಯಿಂದಲೂ ಸ್ಪರ್ಧಿಸುವಂತೆ ಒತ್ತಾಯ ಕೇಳಿ ಬರುತ್ತಿದೆ. ಆದರೆ, ನಾನು ಬಾದಾಮಿಯಲ್ಲೇ ಸ್ಪರ್ಧಿಸುತ್ತೇನೆ. ನಾನು ಮೈಸೂರಿನಿಂದ ಬಾದಾಮಿಗೆ ಹೋದವನು. ಅಲ್ಲಿಂದ ಜನ ನನ್ನನ್ನು ಆರಿಸಿ ಕಳಿಸಿದ್ದಾರೆ. ನಾನು ನಾಮಪತ್ರ ಸಲ್ಲಿಸಲು, ಪ್ರಚಾರಕ್ಕೆಂದು ಎರಡೇ ದಿನ ಅಲ್ಲಿಗೆ ಹೋಗಿದ್ದು. ಆದರೂ ಅಲ್ಲಿನ ಜನ ನನ್ನ ಕೈ ಹಿಡಿದರು ಎನ್ನುತ್ತಲೇ ಸಿದ್ದರಾಮಯ್ಯ ಭಾವುಕರಾದರು. ಸುಮ್ಮನೆ ಖರ್ಚು ಮಾಡಿಕೊಂಡು ನೀವು ಇಲ್ಲಿಗೆ ಬರಬೇಡಿ, ನಾನೇ ಭಾನುವಾರ ಬಾದಾಮಿಗೆ ಬರುವೆ. ಅಲ್ಲಿಯೇ ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದಿದ್ದೆ. ಆದರೂ ಬಂದಿದ್ದೀರಿ. ನಾನು ಬಾದಾಮಿ ಬಿಟ್ಟು ಬೇರೆ ಕಡೆ ಚುನಾವಣೆಗೆ ಸ್ಪರ್ಧಿಸುವುದಾದರೂ ನಿಮ್ಮ ಅನುಮತಿ ಪಡೆದೇ ಹೋಗುವೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು