.
ಬೆಂಗಳೂರು : ಮಾಜಿ ಗೃಹ ಸಚಿವ, ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ|| ಜಿ ಪರಮೇಶ್ವರ್ ನಿನ್ನೆ 70 ನೇ ವರ್ಷದ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ನೆಲಮಂಗಲದ ರೌಡಿ ಶೀಟರ್ ಒಂದಲ್ ರವಿ ಹೂಮಾಲೆ ಹಾಕಿ ಹುಟ್ಟು ಹಬ್ಬದ ಶುಭಾಷಯ ಕೋರಿದ್ದಾರೆ. ತುಮಕೂರಿನ ಸಿದ್ದಾರ್ಥ ನಗರದ ತಮ್ಮ ನಿವಾಸದಲ್ಲಿ ನಡೆದ ಹುಟ್ಟು ಹಬ್ಬ ಸಂಭ್ರಮಾಚರಣೆಯಲ್ಲಿ ಈ ಘಟನೆ ನಡೆದಿದೆ. ರೌಡಿ ಶೀಟರ್ ಒಬ್ಬ ಮಾಜಿ ಗೃಹ ಸಚಿವರಿಗೆ ಶುಭ ಕೋರಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ರೌಡಿ ಶೀಟರ್ ಒಂದಲ್ ರವಿ ಹಾಗೂ ಪರಮೇಶ್ವರ್ ಒಂದೇ ಸಮುದಾಯದವರಾಗಿದ್ದಾರೆ. ಸ್ವಜಾತಿ ಅಭಿಮಾನದಿಂದ ರೌಡಿ ಶೀಟರ್ ರವಿ ಶುಭಾಷಯ ಕೋರಿದ್ದಾರೆ. ರೌಡಿ ಶೀಟರ್ ಒಂದಲ್ ರವಿ ಸಹ ಪರಮೇಶ್ವರ್ ಸಹಕಾರದಿಂದ ರಾಜಕೀಯದಲ್ಲಿ ಸಕ್ರಿಯಗೊಳ್ಳುವ ಯೋಜನೆಯಲ್ಲಿದ್ದು, ನೆಲಮಂಗಲದಲ್ಲಿ ಮುಂಬರುವ ನಗರಸಭೆ ಚುನಾವಣೆಗೆ ಸಹ ಸ್ಪರ್ಧಿಯಾಗುವ ನಿಟ್ಟಿನಲ್ಲಿ ಪರಮೇಶ್ವರ್ ಜೊತೆ ಒಡನಾಟ ಬೆಳೆಸಿಕೊಂಡಿದ್ದಾರೆ ಎನ್ನಲಾಗಿದೆ.