ಚಿಕ್ಕಮಗಳೂರು : ಕಾಫಿಯ ದರ ಕಳೆದ 6 ತಿಂಗಳಿನಿಂದ ಏರುಮುಖವಾಗಿದ್ದು ಕಳೆದ ಬುಧವಾರವಷ್ಟೇ ಅರೇಬಿಕಾ ಪಾರ್ಚ್ ಮೆಂಟ್ ಕಾಫಿ ದರ 50 ಕಿಲೋ ತೂಕದ ಚೀಲಕ್ಕೆ 14,600 ರೂಪಾಯಿಗಳನ್ನು ತಲುಪಿ ಸರ್ವಕಾಲಿಕ ಏರಿಕೆಯನ್ನು ದಾಖಲಿಸಿತು. ಕಳೆದ ಜನವರಿ ಫೆಬ್ರುವರಿ ತಿಂಗಳಿನಲ್ಲಿ ಇದೇ ಚೀಲವೊಂದರ ದರ 10 ಸಾವಿರ ರೂಪಾಯಿಗಳ ಆಸು ಪಾಸಿನಲ್ಲಿತ್ತು.
ಈ ಕಾಫಿ ದರ ಏರಿಕೆಯ ಕಾರಣದಿಂದಲೇ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ ಕಾರಣ ಶಾಕೀರ್ ಅಹ್ಮದ್(28) ಎಂಬ ಮೂಡಿಗೆರೆ ನಿವಾಸಿ ಬೆಂಗಳೂರು ಸಮೀಪದ ನೆಲಮಂಗಲದ ಖಾಸಗಿ ಲಾಡ್ಜ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕಾಫಿ ವ್ಯಾಪಾರ ಮಾಡುತಿದ್ದ ಶಾಕೀರ್ ದರ ಏರಿಕೆಯಿಂದಾಗಿ 1 ಕೋಟಿ ರೂಪಾಯಿಗಳಿಗೂ ಹೆಚ್ಚು ನಷ್ಟ ಅನುಭವಿಸಿದ್ದ ಎನ್ನಲಾಗಿದೆ. ಈತನು ಜುಲೈ 13ರಿಂದ ನಾಪತ್ತೆಯಾಗಿದ್ದಾರೆಂದು ಮೂಡಿಗೆರೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಜುಲೈ 29ರಿಂದ ವಜ್ರೇಶ್ವರಿ ಲಾಡ್ಜ್ನಲ್ಲಿ ತಂಗಿದ್ದ ಶಾಕೀರ್, ಸೋಮವಾರ ಮಧ್ಯಾಹ್ನ ಊಟಕ್ಕೆ ಹೊರ ಬರದಿದ್ದಾಗ ಲಾಡ್ಜ್ ಸಿಬ್ಬಂದಿ ಅನುಮಾನಗೊಂಡು ಪರಿಶೀಲಿಸಿದ್ದರು. ನೇಣುಬಿಗಿದ ಸ್ಥಿತಿಯಲ್ಲಿ ಶಾಕೀರ್ ಅಹ್ಮದ್ ಮೃತದೇಹ ಪತ್ತೆಯಾಗಿದ್ದು, ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳೀಯರ ಪ್ರಕಾರ ಅವಿವಾಹಿತರಾಗಿದ್ದ ಶಾಕೀರ್ ಮತ್ತು ರಶೀದ್ (26) ಎಂಬುವವರು ಕಳೆದ 5 ವರ್ಷಗಳಿಂದ ಮೂಡಿಗೆರೆಯಲ್ಲಿ ಎಫ್ ಆರ್ ಕಾಪಿ ಲಿಂಕ್ಸ್ ಎಂಬ ಅಂಗಡಿ ತೆರೆದು ಬೆಳೆಗಾರರಿಂದ ಕಾಪಿ ಖರೀದಿಸುತಿದ್ದರು. ಇದಕ್ಕೂ ಮೊದಲು ಇವರಿಬ್ಬರೂ ಬೇರೆಯವರ ಕೈ ಕೆಳಗೆ ಅಂಗಡಿ ಕೆಲಸ ಮಾಡುತಿದ್ದರು. ಕಳೆದ ಜನವರಿ ಫೆಬ್ರುವರಿಯಲ್ಲಿ ಬೆಳೆಗಾರರಿಂದ ಕನ್ಸೈನ್ ಮೆಂಟ್ ನಲ್ಲಿ ಸಾವಿರಾರು ಚೀಲ ಅರೇಬಿಕಾ ಪಾರ್ಚ್ಮೆಂಟ್ ಕಾಫಿ ಖರೀದಿಸಿ ಅದನ್ನು ಚೀಲವೊಂದಕ್ಕೆ 150-250 ರೂಪಾಯಿಗಳ ಲಾಭಕ್ಕೆ ಕ್ಯೂರಿಂಗ್ ವರ್ಕ್ಸ್ ನವರಿಗೆ ಮಾರಾಟ ಮಾಡಿದ್ದರು. ಆದರೆ ಜುಲೈ ತಿಂಗಳಿನಲ್ಲಿ ಬ್ರೆಜಿಲ್ ನಲ್ಲಿ ಹಿಮಪಾತಔಆಗಿ ಬೆಳೆ ನಷ್ಟ ಆದ ವದಂತಿ ಬೆನ್ನಲ್ಲಿ ಕಾಫಿ ದರ 14 ಸಾವಿರಕ್ಕಿಂತ ಅಧಿಕವಾಗಿ ಏರಿಕೆ ದಾಖಲಿಸಿತು.
ಇವರಿಗೆ ಕಾಫಿ ನೀಡಿದ್ದವರು ಕೂಡಲೇ ಈಗಿನ ದರಕ್ಕೆ ಸೆಟಲ್ ಮಾಡುವಂತೆ ಒತ್ತಡ ಹೇರಿದರು. ಕೂಡಲೇ ಇಬ್ಬರೂ ಕೂಡ ಬೆಂಗಳೂರಿಗೆ ತೆರಳಿ ಅಜ್ಞಾತರಾದರು. ನಂತರ ಕುಟುಂಬಸ್ಥರು ಫೋನ್ ಮಾಡಿ ಇಬ್ಬರನ್ನೂ ಕರೆದು ಅಲ್ಪ ಸ್ವಲ್ಪ ಏರಿಕೆ ಮಾಡಿ ಸೆಟಲ್ ಮಾಡಿಕೊಡಲು ಒಪ್ಪಿಸಿದರು. ಹಾಗೆ ಬರುವಾರ ಮೆಜೆಸ್ಟಿಕ್ ನಲ್ಲಿ ಶಾಕೀರ್ ಪಾರ್ಟ್ನರ್ ಗೂ ಹೇಳದೇ ನಾಪತ್ತೆ ಆದ , ರಶೀದ್ ಒಬ್ಬನೇ ಊರಿಗೆ ಬಂದಿದ್ದಾನೆ. ಸೋಮವಾರ ನೇಣು ಹಾಕಿಕೊಂಡಿದ್ದಾನೆ. ಇದೀಗ ಎಲ್ಲ ಕಾಪಿ ಬೆಳೆಗಾರರೂ ಮುಖ್ಯವಾಗಿ ಕನ್ಸೈನ್ ಮೆಂಟ್ ನಲ್ಲಿ ಕಾಫಿ ಮಾರಾಟ ಮಾಡುವವರೂ ತೀವ್ರ ಎಚ್ಚರ ವಹಿಸಬೇಕಿದೆ. ಇಲ್ಲದಿದ್ದರೆ ಪಂಗನಾಮ ಖಚಿತ. ಎಷ್ಟೇ ದೊಡ್ಡ ಶ್ರೀಮಂತ ವ್ಯಾಪಾರಿ ಆಗಿದ್ದರೂ ಕಾಫಿ ದರ ಇದ್ದಕ್ಕಿದ್ದಂತೆ ಶೇಕಡಾ 30-40 ರಷ್ಟು ಏರಿಕೆ ದಾಖಲಿಸಿದರೆ ಸೆಟಲ್ ಮಾಡೋದು ಸಾದ್ಯವೇ ಆಗುವುದಿಲ್ಲ ಇದನ್ನು ಎಲ್ಲರೂ ಗಮನಿಸಿ ಜಾಗೃತರಾಗಬೇಕಿದೆ.