News Karnataka Kannada
Monday, May 06 2024
ಕರ್ನಾಟಕ

ಮನೆಗೆ ನುಗ್ಗಿ ಲಕ್ಷಾಂತರ ರೂ. ನಗ-ನಗದು ಕಳವು: ಏಳು ಮಂದಿ ಕಳ್ಳರ ಸೆರೆ

Photo Credit :

ಮನೆಗೆ ನುಗ್ಗಿ ಲಕ್ಷಾಂತರ ರೂ. ನಗ-ನಗದು ಕಳವು: ಏಳು ಮಂದಿ ಕಳ್ಳರ ಸೆರೆ

ಕಳಸ: ಇಲ್ಲಿಯ ಹೊರನಾಡಿನಲ್ಲಿ ಮಾತಾನ್ನಪೂರ್ಣ ವಸತಿ ಗೃಹ ಮತ್ತು ಹೋಟೆಲು ನಡೆಸುತ್ತಿದ್ದ ವಿಜಯಕುಮಾರ್ ಅವರ ಮನೆಯಿಂದ ಫೆ.7ರಂದು ಕಳ್ಳತನವಾದ ಮಾಲು ಸಹಿತ ಏಳು ಮಂದಿ ಕಳ್ಳರನ್ನು ಬಂಧಿಸುವಲ್ಲಿ ಕಳಸ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರಾದವರಲ್ಲಿ ಕಳಸದಲ್ಲಿ ಬಜಾಜ್ ಬೈಕ್ ಶೋ ರೂಂನ ಮಾಲಿಕನಾದ ಪ್ರಶಾಂತ ಯಾನೆ ಗುಂಡ, ಹೊರನಾಡಿನ ಗುರುಪ್ರಸಾದ್, ಕಲ್ಮಕ್ಕಿಯ ಜಗದೀಶ, ಕೊಪ್ಪ ತಾಲೂಕಿನ ಸಂತೋಷ ಯಾನೆ ಕುರುಪ್ಪ, ವಿಜಯಕುಮಾರ, ಇಮ್ತಿಯಾಜ್ ಯಾನೆ ಜೋಟು, ಉದಯ ಎಂದು ಗುರುತಿಸಲಾಗಿದೆ.

ಫೆ. 7ರಂದು ವಿಜಯಕುಮಾರ್ ಮತ್ತು ಕುಟುಂಬದವರು ಬೆಳಗ್ಗೆ ಕೊಲ್ಲೂರು ದೇವರ ದರ್ಶನಕ್ಕೆ ತೆರಳಿದ್ದರು. ಮರಳಿದಾಗ ಮನೆಯಲ್ಲಿ ಕಳ್ಳತನ ನಡೆದು ಸುಮಾರು 90 ಸಾವಿರ ಹಣ, 4.10 ಲಕ್ಷ ರೂ ಮೌಲ್ಯದ ಬಂಗಾರ, 1 ಲಕ್ಷ ರೂ ಮೌಲ್ಯದ 6 ವಾಚುಗಳು, 8 ಸಾವಿರ ರೂ ಮೌಲ್ಯದ ಬೆಳ್ಳಿ ಸಾಮಾನುಗಳನ್ನು ಕಳವು ಮಾಡಿರುವುದು ಗಮನಕ್ಕೆ ಬಂದಿತ್ತು. ಈ ಬಗ್ಗೆ ಹಿಂದೆ ಇದೇ ವಸತಿ ಗೃಹದಲ್ಲಿ ಕೆಲಸ ಮಾಡುತ್ತಿದ್ದ ಜಗದೀಶ ಎಂಬುವವನ ಮೇಲೆ ಅನುಮಾನ ವ್ಯಕ್ತಪಡಿಸಿ ಕಳಸ ಪೊಲೀಸರಿಗೆ ದೂರು ನೀಡಿದ್ದರು. ಈ ಕಾರ್ಯಾಚರಣೆಯಿಂದ ಕಳ್ಳರನ್ನು ಬಂಧಿಸಿ, ಕಳ್ಳತನಕ್ಕೆ ಉಪಯೋಗಿಸಿದ ವಾಹನ, ಒಂದು ಬೈಕ್, 55 ಸಾವಿರ ನಗದು, 4 ಲಕ್ಷ 16 ಸಾವಿರ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
179

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು