ಮಡಿಕೇರಿ: ಮತದಾನದಿಂದ ಯುವಜನರು ಹಾಗೂ ಸಾಮಾನ್ಯ ಜನರು ಹಿಂಜರಿಯುತ್ತಿರುವ ಹಿನ್ನೆಲೆಯಲ್ಲಿ ಮತದಾನ ಮಾಡುವಂತೆ ಪ್ರೋತ್ಸಾಹಿಸಲು ಮಡಿಕೇರಿ ನಗರಸಭೆ ವಿನೂತನ ರೀತಿಯ ಪ್ರಯೋಗ ನಡೆಸಿದೆ.
ಮತದಾನ ಮಾಡಿದವರನ್ನು ಮಹಾಶೂರ ಎಂದು ಕರೆದು, ಅವರನ್ನು ಸಿಂಹಾಸನಕ್ಕೇರಿಸಿ ಗೌರವಿಸಲಾಗುತ್ತಿದೆ. ಮತದಾನ ಮಾಡಿದಂತಹ ಮತದಾರನಿಗೆ ಶಾಲು ಹೊದಿಸಿ ಸನ್ಮಾನಿಸಲಾಗುತ್ತಿದೆ. ಮಡಿಕೇರಿ ನಗರಸಭೆಯು ಈ ವಿನೂತನ ಪ್ರಯೋಗ ಕೈಗೊಂಡಿದೆ.
ಮಡಿಕೇರಿ ನಗರಸಭೆಯ ಮತಗಟ್ಟೆ 219 ಮತಗಟ್ಟೆಯಲ್ಲಿ ಈ ರೀತಿಯಾಗಿ ಮತದಾರರನ್ನು ಸ್ವಾಗತಿಸಿ, ಅವರನ್ನು ಸನ್ಮಾನಿಸಲಾಗುತ್ತಿದೆ.