ಕಾಸರಗೋಡು: ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಈರುಳ್ಳಿ ಸಾಗಾಟದ ಲಾರಿಯಿಂದ ಭಾರೀ ಮೌಲ್ಯದ ನಿಷೇಧಿತ ತಂಬಾಕು ಉತ್ಪನ್ನ ಪತ್ತೆಯಾಗಿದ್ದು, ಲಾರಿಯಲ್ಲಿದ್ದವರು ಪರಾರಿಯಾಗಿದ್ದಾರೆ. ಮಂಗಳವಾರ ಸಂಜೆ ಚೆರ್ವ ತ್ತೂ ರಿನಲ್ಲಿ ಅಪಘಾತ ನಡೆದಿದೆ.
ಮಂಗಳೂರಿನಿಂದ ಕೋಝಿಕ್ಕೊಡ್ ಕಡೆಗೆ ಈರುಳ್ಳಿ ಸಾಗಾಟ ಮಾಡುತ್ತಿದ್ದ ಲಾರಿ ರಾಷ್ಟ್ರೀಯ ಹೆದ್ದಾರಿಯ ಚೆರ್ವತ್ತೂರು ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಮಗುಚಿ ಬಿದ್ದಿದ್ದು, ಪೊಲೀಸರು ಮತ್ತು ನಾಗರಿಕರು ರಕ್ಷಣಾ ಕಾರ್ಯಕ್ಕೆ ತಲಪಿದ್ದು, ಮಗುಚಿ ಬಿದ್ದ ಲಾರಿಯನ್ನು ಮೇಲಕ್ಕೆತ್ತಿ ದಾಗ ಈರುಳ್ಳಿ ಗೋಣಿಗಳೆಡೆಯಲ್ಲಿ ಪಾನ್ ಮಸಾಲ ಪತ್ತೆಯಾಗಿದೆ.
ಲಾರಿಯಲ್ಲಿ 25ರಷ್ಟು ಗೋಣಿ ಈರುಳ್ಳಿ ತುಂಬಿದ್ದು 20 ಗೋಣಿಗಳಷ್ಟು ತಂಬಾಕು ಉತ್ಪನ್ನ ಪತ್ತೆಯಾಗಿದೆ. ಚಂದೇರ ಠಾಣಾ ಪೊಲೀಸರು . ತಂಬಾಕು ಉತ್ಪನ್ನ ಹಾಗೂ ಲಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.