ನವದೆಹಲಿ: ನಾಪತ್ತೆಯಾಗಿ 9ದಿನಗಳ ಬಳಿಕ ಪತ್ತೆಯಾಗಿದ್ದ ಭಾರತೀಯ ವಾಯುಪಡೆಯ ವಿಮಾನ ANರಲ್ಲಿ ಪತ್ತೆಯಾಗಿದ್ದ ವಿಮಾನದಲ್ಲಿದ್ದ ಯಾರೂ ಬದುಕುಳಿದಿಲ್ಲ ಎಂದು ಸೇನೆ ಗುರುವಾರ ಅಧಿಕೃತವಾಗಿ ಘೋಷಿಸಿದೆ.
13ಮಂದಿ ಸೇನಾ ಸಿಬ್ಬಂದಿಯನ್ನು ಹೊತ್ತು ಅರುಣಾಚಲ ಪ್ರದೇಶದ ಮೆನ್ ಚುಕಾಗೆ ತೆರಳಲು ಅಸ್ಸಾಂ ನ ಚೋರ್ಹತ್ ವಾಯುನೆಲೆಯಿಂದ ಮಧ್ಯಾಹ್ನ 12.27 ಟೇಕಾಫ್ ಆಗಿತ್ತು. ಆದರೆ ಆ ಬಳಿಕ ನಿಯಂತ್ರಣ ಕಳೆದುಕೊಂಡಿತ್ತು. ತೀವ್ರ ಹುಡುಕಾಟದ ಬಳಿಕ ಜೂನ್ 11ರಂದು ವಿಮಾನ ಅರುಣಾಚಲ ಪ್ರದೇಶದ ಲಿಪೋ ಎಂಬಲ್ಲಿ ಪತ್ತೆಯಾಗಿತ್ತು. ಗುರುವಾರ ವಿಮಾನದಲ್ಲಿದ್ದ ಒಬ್ಬರೂ ಬದುಕುಳಿದಿಲ್ಲ ಎಂದು ದೃಢಪಡಿಸಿದೆ.
ಮೃತರನ್ನು ಜಿ.ಎಂ.ಚಾರ್ಲ್ಸ್, ಎಚ್.ವಿನೋದ್, ಆರ್.ತಾಪ, .ತನ್ವರ್, ಎಸ್.ಮೊಹಂತಿ, ಎಂ.ಕೆ. ಗರಕ್, ಕೆ.ಕೆ.ಮಿಶ್ರಾ, ಅನೂಪ್ ಕುಮಾರ್, ಶೆರಿನ್, ಎಸ್.ಕೆ.ಸಿಂಗ್, ಪಂಕಜ್, ಪುಟಾಲಿ ಮತ್ತು ರಾಜೇಶ್ ಕುಮಾರ್ ಎಂದು ತಿಳಿಸಿದೆ.