ಕಾರವಾರ: ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತರ ಜಮೀನಿನಲ್ಲಿ ಸರಕಾರ ನಾಗರಿಕ ವಿಮಾನ ನಿಲ್ದಾಣ ಮಾಡಲು ಮುಂದಾಗಿದೆ. ನಮ್ಮ ಜಮೀನನ್ನು ನಾವು ಯಾವುದೇ ಕಾರಣಕ್ಕೂ ನೀಡುವುದಿಲ್ಲ ಎಂದು ಪದ್ಮಶ್ರೀ ಪುರಸ್ಕೃತೆ, ಅಂಕೋಲಾದ ಸುಕ್ರಿ ಗೌಡ ಹೇಳಿದ್ದಾರೆ.
ಕಾರವಾರ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆಗೆ ನಾವು ವಿರೋಧ ಮಾಡುವುದಿಲ್ಲ. ಆದರೆ ಯೋಜಿತ ಸ್ಥಳವಾದ ಬಾವಿಕೇರಿ, ಅಲಗೇರಿ, ಬಡಗೇರಿಯನ್ನು ಬಿಟ್ಟು ಹೆಚ್ಚಿನ ಸ್ಥಳಾವಕಾಶವನ್ನು ಇರುವ ನಿಲ್ಲೂರು, ಕುಚ್ಚಿನಬೈಲು, ಬರಡೆಯಲ್ಲಿ ಯೋಜನೆಯನ್ನು ಕಾರ್ಯರೂಪಕ್ಕೆ ತರುವಂತೆ ಒತ್ತಾಯಿಸಿದ್ದರು.
ಅಂಕೋಲಾದ ಬಾವಿಕೇರಿ, ಅಲಗೇರಿ ಹಾಗೂ ಬಡಗೇರಿಯಲ್ಲಿ ಅನೇಕ ರೈತರಿದ್ದಾರೆ. ಇಲ್ಲಿನ ಜನರು ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಈ ಹಿಂದೆ ಸೀ ಬರ್ಡ್ ನೌಕಾನೆಲೆ ಯೋಜನೆಯಿಂದಾಗಿ ಒಮ್ಮೆ ನಿರಾಶ್ರಿತರಾಗಿದ್ದಾರೆ. ಈಗ ನಾಗರಿಕ ವಿಮಾನ ನಿಲ್ದಾಣ ಸ್ಥಾಪನೆ ಮಾಡಿ ಮತ್ತೇ ನಿರಾಶ್ರಿತರನ್ನಾಗಿ ಮಾಡಬೇಡಿ ಎಂದು ಒತ್ತಾಯ ಮಾಡಿದ ಅವರು, ನಮಗೆ ಸರಕಾರದ ಯಾವುದೇ ಪರಿಹಾರ ಬೇಡ. ನಮ್ಮ ಜಮೀನು ನಾವು ಯೋಜನೆಗೆ ನೀಡುವುದಿಲ್ಲ ಎಂದರು.