ಕಾಸರಗೋಡು: ಆಂಧ್ರ ಪ್ರದೇಶದ ಚಿತ್ತೂರಿ ನಲ್ಲಿ ಕಾರು ಮತ್ತು ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾಸರಗೋಡಿನ ನಾಲ್ವರು ಮೃತಪಟ್ಟು , ಆರು ಮಂದಿ ಗಾಯಗೊಂಡ ಘಟನೆ ಆದಿತ್ಯವಾರ ಮುಂಜಾನೆ ನಡೆದಿದೆ.
ಕಾರಿನಲ್ಲಿ ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಮೃತಪಟ್ಟವರನ್ನು ಕುಂಬಳೆ ನಾಯ್ಕಪಿನ ಪಕ್ಕೀರ ಗಟ್ಟಿ ( ೭೨) , ಸಹೋದರ ಮಂಜಪ್ಪ ಗಟ್ಟಿ (೭೨) , ಪತ್ನಿ ಸುಂದರಿ ( ೫೫) ಮತ್ತು ಸಂಬಂಧಿಕ ಮಧೂರು ಮನ್ನಿಪ್ಪಾಡಿಯ ಸದಾಶಿವ ( ೫೫) ಎಂದು ಗುರುತಿಸಲಾಗಿದೆ.
ಜೀಪು ಚಾಲಕ ಕುಂಬಳೆ ಪೆರುವಾಡಿನ ಉಮೇಶ್ (೪೦) , ಹರೀಶ್ ( ೩೦), ಕುಂಬಳೆ ಯ ಲಕ್ಷ್ಮಿ , ಮಾಧವ , ಭೋಜ , ನಾಗೇಶ ಗಾಯಗೊಂಡಿದ್ದು , ಇವರನ್ನು ಚಿತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿತ್ತೂರಿನ ಬಂಗಾರುಪಾಳ್ಯಂ ಎಂಬಲ್ಲಿ ಈ ಮುಂಜಾನೆ ಮೂರು ಗಂಟೆ ಸುಮಾರಿಗೆ ಅಪಘಾತ ನಡೆದಿದೆ.
ಖಾಸಗಿ ಬಸ್ ಚಾಲಕ ಕಂಟೇನರ್ ಹಿಂದಿಕ್ಕುವ ಯತ್ನದಲ್ಲಿ ಎದುರುಗಡೆಯಿಂದ ಬರು ತ್ತಿದ್ದ ಕಾರಿಗೆ ವಾಹನ ಡಿಕ್ಕಿ ಹೊಡೆಸಿದ್ದು ಈ ಅಪಘಾತದಲ್ಲಿ ಮಹಿಳೆ ಸೇರಿ ಮೂವರು ಮೃತಪಟ್ಟಿದ್ದು, ಓರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಶನಿವಾರ ಮಧ್ಯಾಹ್ನ ಹತ್ತು ಮಂದಿ ಕುಂಬಳೆ ನಾಯ್ಕಪಿನ ಮನೆಯಿಂದ ತಿರುಪತಿ ದೇವಸ್ಥಾನಕ್ಕೆ ಪ್ರಯಾಣ ಬೆಳೆಸಿದ್ದರು.
ಮೃತಪಟ್ಟ ಪಕ್ಕೀರ ಮತ್ತು ಮಂಜಪ್ಪ ಗಟ್ಟಿ ಕೃಷಿಕರಾಗಿದ್ದರು, ಸದಾಶಿವ ಕಾಂಕ್ರೀಟ್ ಕಾರ್ಮಿಕರಾಗಿ ದುಡಿಯುತ್ತಿದ್ದರು.
ಮೃತ ದೇಹಗಳನ್ನು ಊರಿಗೆ ತರುವ ಸಿದ್ಧತೆ ನಡೆಯುತ್ತಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.