News Karnataka Kannada
Wednesday, May 08 2024
ಕರ್ನಾಟಕ

ಚಿಕ್ಕಮಗಳೂರಿನಲ್ಲೂ ಶೀಘ್ರದಲ್ಲೇ ಇಂದಿರಾ ಕ್ಯಾಂಟೀನ್ ಕಾರ್ಯಾರಂಭ

Photo Credit :

ಚಿಕ್ಕಮಗಳೂರಿನಲ್ಲೂ ಶೀಘ್ರದಲ್ಲೇ ಇಂದಿರಾ ಕ್ಯಾಂಟೀನ್ ಕಾರ್ಯಾರಂಭ

ಚಿಕ್ಕಮಗಳೂರು: ರಾಜ್ಯ ಸರ್ಕಾರದ ಸಿಎಂ ಸಿದ್ದರಾಮಯ್ಯ ನವರ ಅತ್ಯಂತ ಮಹತ್ವಕಾಂಕ್ಷೆ ಯೋಜನೆಯಾದ ಇಂದಿರಾ ಕ್ಯಾಂಟೀನ್ ಚಿಕ್ಕಮಗಳೂರಿನಲ್ಲಿಯೂ ಪ್ರಾರಂಭ ಆಗುತ್ತಿದೆ.ಇಂದಿರಾಗಾಂದಿ ಅವರಿಗೆ ಮರುಜನ್ಮ ನೀಡಿದ ಜಿಲ್ಲೆ ಚಿಕ್ಕಮಗಳೂರು ಜಿಲ್ಲೆ ಅವರಿಗೆ ರಾಜಕೀಯದಲ್ಲಿ ಮೇಲೆತ್ತಿದ್ದ ಜಿಲ್ಲೆಯಿಂದಲೇ ಇಂದಿರಾ ಕ್ಯಾಂಟೀನ್ ಆರಂಭ ಆಗಬೇಕು ಎಂಬುದು ಇಲ್ಲಿನ ಜನರ ಮಹಾದಾಸೆಯಾಗಿತ್ತು .ಆದರೆ ಸರ್ಕಾರ ಬೆಂಗಳೂರಿನಲ್ಲಿಯೇ ಮೊದಲು ಪ್ರಾರಂಭ ಮಾಡಿತ್ತು.

ಆದರೆ ಚಿಕ್ಕಮಗಳೂರು ಜಿಲ್ಲೆಗೆ ರಾಜ್ಯ ಸರ್ಕಾರ  8 ಇಂದಿರಾ ಕ್ಯಾಂಟೀನ್ ಮಂಜೂರು ಮಾಡಿದ್ದು ಚಿಕ್ಕಮಗಳೂರು ತಾಲೂಕಿನಲ್ಲಿ 2 ಕ್ಯಾಂಟೀನ್ ಮಾಡಲು ಅವಕಾಶ ಮಾಡಿಕೊಟ್ಟಿದೆ ಅದರಲ್ಲಿ ಮೊದಲನೆಯದಾಗಿ ಹಳೇ ಜೈಲಿನ ಆವರಣದಲ್ಲಿ ತರಾತುರಿಯಲ್ಲಿ ಜಿಲ್ಲಾಡಳಿತ ಇಂದಿರಾ ಕ್ಯಾಂಟೀನ್ ರೆಡಿಯಾಗುತ್ತಿದ್ದು ಇದೇ ತಿಂಗಳು 21 ಕ್ಕೆ ಉದ್ಘಾಟನೆ ಆಗುವ ಸಾಧ್ಯತೆ ಇದೆ.

ಹೌದು ಇದೇ ತಿಂಗಳು 21 ಕ್ಕೆ ಎಐಸಿಸಿ ರಾಷ್ಟ್ರಧ್ಯಕ್ಷ ರಾಹುಲ್ ಗಾಂಧಿ ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸುತ್ತಿದ್ದು ಶೃಂಗೇರಿ ಶಾರದಾಂಭೆಯ ದರ್ಶನ ಪಡೆದ ನಂತರ ಚಿಕ್ಕಮಗಳೂರಿನ ಕಡೆ ಆಗಮಿಸುತ್ತಾರೆ. ಅವರ  ಕೈ ಯಿಂದಲೇ ಈ ಕ್ಯಾಂಟೀನ್ ಉದ್ಗಾಟನೆ ಮಾಡಿಸಬೇಕು ಎಂದೂ ರಾಜ್ಯ ಸರ್ಕಾರ ತರಾತುರಿಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುತ್ತಿದೆ. ಕ್ಯಾಂಟೀನ್ ನಿರ್ಮಾಣಕ್ಕೆ ಆಯ್ಕೆ ಮಾಡಿಕೊಂಡಿರುವ ಜಾಗ ನಿಜಕ್ಕೂ ಅತ್ಯಂತ ಸೂಕ್ತ ಜಾಗವಾಗಿದ್ದು ಅಕ್ಕ ಪಕ್ಕದಲ್ಲಿಯೇ ಕಾಲೇಜುಗಳಿವೆ.

ಹಾಗೂ ಸರ್ಕಾರಿ ಬಸ್ ನಿಲ್ಡಾಣವಿದೆ. ನಗರದ ಪ್ರಮುಖ ಇಂದಿರಾ ಗಾಂಧಿ ರಸ್ತೆಯಲ್ಲಿರುವ ಜೈಲ್ ಆವರಣದಲ್ಲಿಯೇ ಕ್ಯಾಂಟೀನ್ ನಿರ್ಮಾಣ ಆಗುತ್ತಿರೋದಕ್ಕೆ ಕಾಂಗ್ರೇಸ್ ಕಾರ್ಯಕರ್ತರು ಸಂತೋಷ ವ್ಯಕ್ತಪಡಿಸುತ್ತಿದ್ದು ಇನ್ನೊಂದು ಕ್ಯಾಂಟೀನ್ ಆಜಾದ್ ಪಾರ್ಕ್ ವೃತ್ತದಲ್ಲಿ ನಿರ್ಮಾಣ ಆಗುವ ಸಾಧ್ಯತೆ ಇದೆ…

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
179

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು