ಸೋಮವಾರಪೇಟೆ: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ನಾಗರತ್ನ ಆಯ್ಕೆಯಾದರು. ಮಂಗಳವಾರ ಪಂಚಾಯಿತಿ ಸಭಾಂಗಣದಲ್ಲಿ ತಹಸೀಲ್ದಾರ್ ಮಹೇಶ್ ಅವರ ನೇತೃತ್ವದಲ್ಲಿ ಚುನಾವಣೆ ನಡೆಯಿತು. ನಾಗರತ್ನ ಅವರು ಒಬ್ಬರೆ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಚುನಾವಣೆಯ ಸಂದರ್ಭ ಪಂಚಾಯಿತಿ ಮಾಜಿ ಅಧ್ಯಕ್ಷ ಧರ್ಮಾಚಾರಿ, ಸದಸ್ಯರಾದ ಎಂ.ಡಿ.ಹರೀಶ್, ಟಿ.ಟಿ.ಹೇಮಂತ್, ಎಸ್.ಎನ್.ಪೃಥ್ವಿ, ಎಚ್.ಎಂ.ಜಿತೇಂದ್ರ, ಶಿವಮ್ಮ, ಸವಿತ, ಲಕ್ಷ್ಮೀ, ಪ್ರೇಮ, ಪಿಡಿಒ ಎಸ್.ಪಿ.ಲಿಖಿತ ಇದ್ದರು.
ನಾಗರತ್ನ ಅವಿರೋಧವಾಗಿ ಆಯ್ಕೆಯಾಗುತ್ತಿದ್ದಂತೆ ಪಂಚಾಯಿತಿ ಮುಂಭಾಗ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭ ತಾಪಂ ಸದಸ್ಯೆ ಕುಸುಮಾ ಅಶ್ವಥ್, ಪಕ್ಷದ ಕ್ಷೇತ್ರ ಸಮಿತಿ ಅಧ್ಯಕ್ಷ ಎಚ್.ಆರ್.ಸುರೇಶ್, ಪ್ರಮುಖರಾದ ಎಚ್.ಪಿ.ರಾಜಪ್ಪ, ಕೆ.ಆರ್.ಕೊಮಾರಪ್ಪ, ಸಿ.ಎನ್.ಅಶೋಕ್, ಜಿ.ಎ.ಮಹೇಶ್, ಹೆಗ್ಗುಳ ಹೂವಯ್ಯ, ಬಗ್ಗನ ಅನಿಲ್ ಮತ್ತಿತರರು ಇದ್ದರು.