News Karnataka Kannada
Friday, May 03 2024
ಕರ್ನಾಟಕ

ಕೋವಿಡ್‌ ಮೂರನೇ ಅಲೆ ಎರಡನೇ ಅಲೆಯಷ್ಟು ಭೀಕರವಲ್ಲ; ಆರೋಗ್ಯ ತಜ್ಞರು

coivd 19
Photo Credit :

 

ನವ ದೆಹಲಿ : ಈಗಾಗಲೇ ಎರಡು ಅಲೆಗಳ ಕೋವಿಡ್‌ ನ್ನು ನೋಡಿರುವ ಜನರಿಗೆ ಇದು ತೊಲಗಿದರೆ ಸಾಕಪ್ಪಾ ಎನಿಸಿಬಿಟ್ಟಿದೆ. ಈಗಾಗಲೇ ಸರ್ಕಾರಗಳು ಆಗಸ್ಟ್‌ ತಿಂಗಳ ಮಧ್ಯ ಭಾಗದ ನಂತರ ಬರಲಿದೆ ಎನ್ನಲಾದ ಕೋವಿಡ್‌ ಮೂರನೇ ಅಲೆಗೆ ಸಿದ್ದವಾಗುತ್ತಿವೆ. ಆರೋಗ್ಯ ತಜ್ಞರ ಸಮಿತಿಯು ಮುಂಬರುವ ಕೋವಿಡ್ ಸಾಂಕ್ರಾಮಿಕ ಅಲೆ ಎರಡನೆಯ ಅಲೆಯಷ್ಟು ಭೀಕರವಾಗಿರುವುದಿಲ್ಲ ತಿಳಿಸಿ ಜನರಿಗೆ ಒಂದಷ್ಟು ನೆಮ್ಮದಿ ನೀಡಿದೆ.
ಇತ್ತೀಚೆಗೆ ಹೈದರಾಬಾದ್ ಮತ್ತು ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯಲ್ಲಿ ಮಥುಕುಮಳ್ಳಿ ವಿದ್ಯಾಸಾಗರ್ ಹಾಗೂ ಮಣೀಂದ್ರ ಅಗರ್‌ವಾಲ್ ತಂಡದ ನೇತೃತ್ವದಲ್ಲಿ ಕೋವಿಡ್ ಸಾಂಕ್ರಾಮಿಕದ ಕುರಿತು ಅಧ್ಯಯನ ನಡೆಸಲಾಗಿದ್ದು, ಆಗಸ್ಟ್ ತಿಂಗಳಲ್ಲಿ ಕೋವಿಡ್ ಪ್ರಕರಣಗಳು ಉತ್ತುಂಗಕ್ಕೆ ಏರಲಿದೆ ಎಂಬುದು ತಿಳಿದು ಬಂದಿದೆ. ಈ ಪ್ರಕರಣಗಳು ಕಡಿಮೆ ಎಂದರೆ 100,000 ಸಂಖ್ಯೆಯನ್ನು ತಲುಪಲಿದ್ದು ಗರಿಷ್ಠ ಎಂದರೆ 150,000 ತಲುಪುವ ಸಾಧ್ಯತೆ ಇದೆ ಎಂಬುದಾಗಿ ಅಧ್ಯಯನ ತಂಡ ಸ್ಪಷ್ಟಪಡಿಸಿದೆ.
ಅಕ್ಟೋಬರ್‌ನಲ್ಲಿ ಕೊರೋನಾದ ಮೂರನೇ ಅಲೆ ತಾರಕಕ್ಕೆ ಏರಲಿದೆ ಎಂಬುದಾಗಿ ಸಂಶೋಧಕರ ತಂಡ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಸಂತಸದ ವಿಷಯವೆಂದರೆ ಮೂರನೇ ಅಲೆ ಅಷ್ಟೊಂದು ಭಯಾನಕವಾಗಿರುವುದಿಲ್ಲ ಎಂದು ತಿಳಿಸಿದ್ದಾರೆ. ಎರಡನೇ ಅಲೆಗೆ ಹೋಲಿಸಿದರೆ ಇದು ತೀವ್ರವಾದ ನಷ್ಟವನ್ನುಂಟು ಮಾಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಗಣಿತ ಶಾಸ್ತ್ರದ ಮಾದರಿಯನ್ನು ಆಧರಿಸಿ ತಜ್ಞರು ಈ ವಿಚಾರವನ್ನು ತಿಳಿಸಿದ್ದು ಮೂರನೇ ಅಲೆಯಲ್ಲಿ ಮಹತ್ತರ ಬದಲಾವಣೆಯನ್ನುಂಟು ಮಾಡಲು ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳು ಕಾರಣವಾಗಬಹುದು ಎಂದು ತಿಳಿಸಿದ್ದಾರೆ.
ಮೇ ತಿಂಗಳಿನಲ್ಲಿ ಐಐಟಿ ಹೈದರಾಬಾದ್‌ನ ಪ್ರಾಧ್ಯಾಪಕರಾದ ವಿದ್ಯಾಸಾಗರ್ ಗಣಿತದ ಮಾದರಿಯನ್ನು ಆಧರಿಸಿ ಮುಂಬರುವ ದಿನಗಳಲ್ಲಿ ಭಾರತದ ಕೊರೊನಾ ವೈರಸ್ ಸಾಂಕ್ರಾಮಿಕ ಉತ್ತುಂಗಕ್ಕೇರಬಹುದು ಎಂದು ಊಹಿಸಿದ್ದರು. ಅದರೆ, ಕಳೆದ ತಿಂಗಳ ಮಧ್ಯದ ವೇಳೆಯಲ್ಲಿ ಅಲೆ ಉತ್ತುಂಗಕ್ಕೇರಬಹುದೆಂಬ ಏಪ್ರಿಲ್‌ನ ಊಹೆ ತಪ್ಪಾಗಿದೆ ಎಂಬುದನ್ನು ಇಲ್ಲಿ ಗಮನಿಸಬೇಕಾಗಿದೆ. ಟ್ವಿಟ್ಟರ್‌ನಲ್ಲಿ ಈ ಕುರಿತು ಸಮಜಾಯಿಷಿಕೆ ನೀಡಿರುವ ತಂಡವು ಸಾಂಕ್ರಾಮಿಕ ಒಂದು ವಾರದವರೆಗೂ ವೇಗವಾಗಿ ಬದಲಾಗುತ್ತಿದ್ದುದರಿಂದ ತಪ್ಪಾದ ಮಾನದಂಡಗಳನ್ನು ನಿರ್ಧರಿಸಲಾಯಿತು ಎಂದು ತಿಳಿಸಿವೆ.
ಕೋವಿಡ್‌ ಮೂರನೇ ಅಲೆಯ ಆರಂಭದೊಂದಿಗೆ ಚಿಕನ್‌ಪಾಕ್ಸ್‌ನಂತೆ ಸುಲಭವಾಗಿ ಹರಡುವ ಹಾಗೂ ಲಸಿಕೆ ಹಾಕಲಾದ ಜನರಿಂದ ಹರಡುವ ಡೆಲ್ಟಾ ರೂಪಾಂತರವು ಪ್ರಕರಣಗಳ ಉಲ್ಬಣಕ್ಕೆ ಕಾರಣವಾಗಬಹುದು ಎಂಬುದನ್ನು ತಿಳಿಸಿದ್ದಾರೆ. Indian Sars-CoV-2 ಜೀನೋಮಿಕ್ ಕನ್ಸೋರ್ಟಿಯಂ (INSACOG) ಪ್ರಕಾರ ಮೇ, ಜೂನ್ ಹಾಗೂ ಜುಲೈನಲ್ಲಿ ಪ್ರತಿ 10 ಕೋವಿಡ್ – 19 ಪ್ರಕರಣಗಳಲ್ಲಿ ಸರಿಸುಮಾರು 8 ಪ್ರಕರಣಗಳು ಕೊರೋನಾ ವೈರಸ್‌ನ ಡೆಲ್ಟಾ ರೂಪಾಂತರದಿಂದ ಉಂಟಾಗಿದೆ ಎಂದು ತಿಳಿಸಿದ್ದಾರೆ.ಭಾರತದಲ್ಲಿ ಭಾನುವಾರ 41,831 ಕೋವಿಡ್ -19 ಪ್ರಕರಣಗಳು ಮತ್ತು 541 ಸಾವುಗಳು ವರದಿಯಾಗಿದ್ದು. ಕೇಂದ್ರವು ಪ್ರಸ್ತುತ ಕೇರಳ, ಮಹಾರಾಷ್ಟ್ರ ಮತ್ತು ಈಶಾನ್ಯ ಪ್ರದೇಶಗಳು ಸೇರಿದಂತೆ 10 ರಾಜ್ಯಗಳಿಗೆ ಕೊರೊನಾ ವೈರಸ್ ಹರಡುವುದನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು