ಮಂಗಳೂರು : ಕೊರೋನಾ ಸಂಕಟದ ಮಧ್ಯೆಯೇ ದೇಶವಿದೇಶಗಳಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನಯಾನ ಸೇವೆ ಏರಿಕೆ ಆಗಿದ್ದು ಪ್ರಯಾಣಿಕರ ಸಂಖ್ಯೆಯೂ ಹೆಚ್ಚಳವಾಗಿದೆ. ದೇಶದ ವಿವಿಧ ರಾಜ್ಯಗಳಿಗೆ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಆಗಸ್ಟ್ ನಲ್ಲಿ 26067 ಪ್ರಯಾಣಿಕರು ತೆರಳಿದ್ದಾರೆ.
ಜುಲೈಯಲ್ಲಿ ಈ ಸಂಖ್ಯೆ 18557 ಆಗಿತ್ತು ಈ ಮೂಲಕ ಪ್ರಯಾಣಿಕರ ಸಂಖ್ಯೆಯಲ್ಲಿ ಶೇಕಡಾ ನಲವತ್ತ ರಷ್ಟು ಏರಿಕೆ ದಾಖಲಿಸಿ, ಈ ಮಧ್ಯೆ ಆಗಸ್ಟ್ ನಲ್ಲಿ ವಿವಿಧ ರಾಜ್ಯಗಳಿಂದ ಮಂಗಳೂರಿಗೆ 26732 ಪ್ರಯಾಣಿಕರು ಬಂದಿಳಿದಿದ್ದರೆ ಜುಲೈಯಲ್ಲಿ ಈ ಸಂಖ್ಯೆ 19744 ಆಗಿತ್ತು.
ಭಾರತದೊಳಗೆ ಮತ್ತು ವಿದೇಶಗಳಿಗೆ ಪ್ರಯಾಣ ನಿರ್ಬಂಧಗಳನ್ನು ಸಡಿಲಗೊಳಿಸುವುದರಿಂದ ವಿವಿಧ ವಿಮಾನಯಾನ ಸಂಸ್ಥೆಗಳು ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ ವಿಮಾನ ಯಾನವನ್ನು ಪುನರಾರಂಭಿಸುದರಿಂದ ಪ್ರಯಾಣಿಕರ ಸಂಖ್ಯೆ ಏರಿಕೆ ಕಂಡಿವೆ. ಕೋರೋಣ ಬಳಿಕ ಇಂಡಿಗೋ ಸಂಸ್ಥೆಯು ಶಾರ್ಜಾಕ್ಕೆ ತನ್ನ ವಿಮಾನಯಾನ ಪುನರಾರಂಭಿಸಿದೆ.
ಹೈದರಾಬಾದಿಗೂ ಹೆಚ್ಚುವರಿ ಹಾರಾಟ ಆರಂಭಿಸಿದೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ ಅಬುದಾಬಿ ಸಂಚಾರವನ್ನು ಕೂಡ ಪುನರಾರಂಭಿಸಿದೆ. ಆಗಸ್ಟ್ ನಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ಅಬುಧಾಬಿ ದುಬೈ ತಿರುವನಂತಪುರಂ ಯಾನ ನಡೆಸಿದರೆ ಇಂಡಿಗೋ ಹೈದ್ರಾಬಾದ್ ಮತ್ತು ಶಾರ್ಜಾಕ್ಕೆ ಏರ್ ಇಂಡಿಯಾವು ಮುಂಬೈ ಮತ್ತು ಕೊಯಮತ್ತೂರಿಗೆ ಪ್ರತಿನಿತ್ಯದ ಯಾನ ಆರಂಭಿಸಿದೆ ಎಂದು ನಿಲ್ದಾಣದ ಮೂಲಗಳು ತಿಳಿಸಿವೆ.