News Karnataka Kannada
Wednesday, May 01 2024
ಮಂಗಳೂರು

ಕೊರೋನಾ ಸಂಕಟದ ಮಧ್ಯೆ ವಿಮಾನಯಾನ ಸೇವೆ ಏರಿಕೆ

Dubai-Mangaluru flight passengers shocked to hear ticket prices
Photo Credit :

ಮಂಗಳೂರು : ಕೊರೋನಾ ಸಂಕಟದ ಮಧ್ಯೆಯೇ ದೇಶವಿದೇಶಗಳಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನಯಾನ ಸೇವೆ ಏರಿಕೆ ಆಗಿದ್ದು ಪ್ರಯಾಣಿಕರ ಸಂಖ್ಯೆಯೂ ಹೆಚ್ಚಳವಾಗಿದೆ. ದೇಶದ ವಿವಿಧ ರಾಜ್ಯಗಳಿಗೆ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಆಗಸ್ಟ್ ನಲ್ಲಿ 26067 ಪ್ರಯಾಣಿಕರು ತೆರಳಿದ್ದಾರೆ.

ಜುಲೈಯಲ್ಲಿ ಈ ಸಂಖ್ಯೆ 18557 ಆಗಿತ್ತು ಈ ಮೂಲಕ ಪ್ರಯಾಣಿಕರ ಸಂಖ್ಯೆಯಲ್ಲಿ ಶೇಕಡಾ ನಲವತ್ತ ರಷ್ಟು ಏರಿಕೆ ದಾಖಲಿಸಿ, ಈ ಮಧ್ಯೆ ಆಗಸ್ಟ್ ನಲ್ಲಿ ವಿವಿಧ ರಾಜ್ಯಗಳಿಂದ ಮಂಗಳೂರಿಗೆ 26732 ಪ್ರಯಾಣಿಕರು ಬಂದಿಳಿದಿದ್ದರೆ ಜುಲೈಯಲ್ಲಿ ಈ ಸಂಖ್ಯೆ 19744 ಆಗಿತ್ತು.

ಭಾರತದೊಳಗೆ ಮತ್ತು ವಿದೇಶಗಳಿಗೆ ಪ್ರಯಾಣ ನಿರ್ಬಂಧಗಳನ್ನು ಸಡಿಲಗೊಳಿಸುವುದರಿಂದ ವಿವಿಧ ವಿಮಾನಯಾನ ಸಂಸ್ಥೆಗಳು ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ ವಿಮಾನ ಯಾನವನ್ನು ಪುನರಾರಂಭಿಸುದರಿಂದ ಪ್ರಯಾಣಿಕರ ಸಂಖ್ಯೆ ಏರಿಕೆ ಕಂಡಿವೆ.  ಕೋರೋಣ ಬಳಿಕ ಇಂಡಿಗೋ ಸಂಸ್ಥೆಯು ಶಾರ್ಜಾಕ್ಕೆ ತನ್ನ ವಿಮಾನಯಾನ ಪುನರಾರಂಭಿಸಿದೆ.

ಹೈದರಾಬಾದಿಗೂ ಹೆಚ್ಚುವರಿ ಹಾರಾಟ ಆರಂಭಿಸಿದೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ ಅಬುದಾಬಿ ಸಂಚಾರವನ್ನು ಕೂಡ ಪುನರಾರಂಭಿಸಿದೆ. ಆಗಸ್ಟ್ ನಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ಅಬುಧಾಬಿ ದುಬೈ ತಿರುವನಂತಪುರಂ ಯಾನ ನಡೆಸಿದರೆ ಇಂಡಿಗೋ ಹೈದ್ರಾಬಾದ್ ಮತ್ತು ಶಾರ್ಜಾಕ್ಕೆ ಏರ್ ಇಂಡಿಯಾವು ಮುಂಬೈ ಮತ್ತು ಕೊಯಮತ್ತೂರಿಗೆ ಪ್ರತಿನಿತ್ಯದ ಯಾನ ಆರಂಭಿಸಿದೆ ಎಂದು ನಿಲ್ದಾಣದ ಮೂಲಗಳು ತಿಳಿಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು