ಕಾಸರಗೋಡು: ಕಾರ್ ಮತ್ತು ಓಮ್ನಿ ಮುಖಾಮುಖಿ ಡಿಕ್ಕಿ ಹೊಡೆದು ಮೂವರು ಗಾಯಗೊಂಡ ಘಟನೆ ಕುಂಬಳೆ ರೈಲ್ವೆ ನಿಲ್ದಾಣ ಪರಿಸರದಲ್ಲಿ ನಡೆದಿದೆ. ಓಮ್ನಿ ಚಾಲಕ ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡವರಲ್ಲಿ ಓಮ್ನಿ ಚಾಲಕ ಕುಂಬಳೆ ಕೊಯಿಪ್ಪಾಡಿಯ ಹಕೀಮ್ (30), ಕಾರಿನಲ್ಲಿದ್ದ ಇಮ್ತಿಯಾಜ್ (16) ಮತ್ತು ಇಂನಾಸ್ (50) ಒಳಗೊಂಡಿದ್ದು, ಹಕೀಮ್ ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.