ಕಾರವಾರ: ಸಾಲ ಬಾಧೆ ತಾಳಲಾರದೆ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಡಗೋಡ ತಾಲೂಕಿನ ನಂದಿಕಟ್ಟಾದಲ್ಲಿಂದು ನಡೆದಿದೆ.
ನಂದಿಕಟ್ಟಾ ಗ್ರಾಮದ ರೈತ ಪ್ರಕಾಶ ಖಟಾವಕರ್(45) ಆತ್ಮಹತ್ಯೆ ಮಾಡಿಕೊಂಡ ರೈತ. ಈತ ಕೃಷಿ ಕಾರ್ಯಕ್ಕೆಂದು ಬ್ಯಾಂಕ್ ಒಂದರಲ್ಲಿ ಕೈ ತುಂಬಾ ಸಾಲ ಪಡೆದುಕೊಂಡಿದ್ದ. ಆದರೆ ಬೆಳೆದ ಬೆಳೆ ಸರಿಯಾಗಿ ಬಾರದೆ ಇರುವುದರಿಂದ ಸಂಕಷ್ಟಕ್ಕೆ ಒಳಗಾಗಿದ್ದ. ಅದು ಅಲ್ಲದೆ ಬ್ಯಾಂಕ್ ನವರು ಸಹ ಸಾಲ ತುಂಬುವಂತೆ ಒತ್ತಡ ಹಾಕತ್ತಾ ಇರುವ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಬಗ್ಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ.