ಹಾವೇರಿ: ಕಾರವಾರದ ಕೂರ್ಮಗಡ ದ್ವೀಪದ ದೇವರ ಜಾತ್ರೆ ಮುಗಿಸಿ ಸೋಮವಾರ ವಾಪಾಸ್ಸಾಗುತ್ತಿದ್ದ ವೇಳೆ ದೋಣಿ ಮುಳುಗಿ ಮೃತಪಟ್ಟ ಒಂದೇ ಕುಟುಂಬದ ಏಳು ಜನರ ಅಂತ್ಯಕ್ರಿಯೆ ಸಾಮೂಹಿಕವಾಗಿ ನೆರವೇರಿಸಲಾಯಿತು.
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾ.ಹೊಸೂರು ಗ್ರಾಮದ ಒಂದೇ ಕುಟುಂಬದ ಪರಶುರಾಮ ಬಸವಣ್ಣೆಪ್ಪ ಬೆಳವಲಕೊಪ್ಪ(38), ಭಾರತಿ(28), ಸಂಜೀವಿನಿ(14), ಸೌಜನ್ಯ(13) ನಿರ್ಮಲಾ(24), ಕಿರಣ(5) ಮತ್ತು ಅರುಣ(2)ರ ಮೃತದೇಹಗಳು ಪತ್ತೆಯಾಗಿದೆ.
ಇನ್ನೂ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಮೃತರಲ್ಲಿ 7 ಜನರ ದೇಹಗಳನ್ನು ಸ್ವಗ್ರಾಮಕ್ಕೆ ತರಲಾಗಿದ್ದು ಅಂತ್ಯಕ್ರಿಯೆ ನೆರವೇರಿಸಲಾಯಿತು.