ಹಾವೇರಿ: ಅರಣ್ಯ ಇಲಾಖೆಯು ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮದಗ ಮಾಸೂರ ಕೆರೆಗೆ ಹೋಗುವ ಮಾರ್ಗದಲ್ಲಿ ಸಸ್ಯೋದ್ಯಾನವನ್ನು ನಿರ್ಮಿಸಿದೆ. ಈ ಸಸ್ಯೋದ್ಯಾನದ ಎದುರು ಹಾಕಲಾಗಿರುವ ನಾಮಫಲಕದಲ್ಲಿನ ಕನ್ನಡ ಪದಗಳಲ್ಲಿ ಅನೇಕ ತಪ್ಪುಗಳನ್ನು ಕಾಣಬಹುದಾಗಿದೆ.
ನಾಮ ಫಲಕದಲ್ಲಿ ಸಸ್ಯೋದ್ಯಾನ ಎಂದು ಬರೆಯುವ ಬದಲು ಸಸ್ಯೋಧಾನ ಎಂದು ತಪ್ಪಾಗಿ ಬರೆದಿರುವರು. ಮತ್ತು ಅಂತ ಬರೆಯುವ ಬದಲು ಮತು ಎಂದು ತಪ್ಪಾಗಿ ಬರೆದಿರುವರು. ಇದಲ್ಲದೆ ಫಾಲ್ಸ್ ಎಂದು ಬರೆಯುವ ಬದಲು ಪಾಲ್ಸಗೆ ದಾರಿ ಎಂದು ತಪ್ಪಾಗಿ ಬರೆದಿರುವದನ್ನು ಕಾಣಬಹುದು.
ಒಂದೇ ನಾಮಫಲಕದಲ್ಲಿ ಮೂರು ತಪ್ಪುಗಳಿದ್ದರೂ ಅರಣ್ಯ ಇಲಾಖೆಯ ಯಾವುದೇ ಅಧಿಕಾರಿಗಳ ಗಮನಕ್ಕೆ ಬಾರದೆ ಇದ್ದುದು ದುರಾದೃಷ್ಟಕರ ಸಂಗತಿ.