News Karnataka Kannada
Saturday, May 04 2024
ಸಾಂಡಲ್ ವುಡ್

ಇದೇ 27ರಂದು ‘ಕೃಷ್ಣ ಟಾಕೀಸ್‌’ ಮತ್ತೆ ತೆರೆಗೆ

Krishna Talkies 24082021
Photo Credit :

ಲಾಕ್‌ಡೌನ್‌ಗೆ ಮುಂಚೆ ಬಿಡುಗಡೆಯಾಗಿದ್ದ ನಟ ಅಜೇಯ್ ರಾವ್‌ ಅಭಿನಯದ ‘ಕೃಷ್ಣ ಟಾಕೀಸ್‌’ ಮತ್ತೆ ಬಿಡುಗಡೆಗೆ ಸಜ್ಜಾಗಿದೆ.

ಆ.27ರಂದು ಈ ಚಿತ್ರವು ಮತ್ತೆ ರಿಲೀಸ್‌ ಆಗಲಿದೆ. ಚಿತ್ರಮಂದಿರಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದ ಸಂದರ್ಭದಲ್ಲಿ ಆಗಸ್ಟ್‌ ಮೊದಲ ವಾರದಲ್ಲೇ ಚಿತ್ರದ ಮರುಬಿಡುಗಡೆಗೆ ಚಿತ್ರತಂಡವು ಸಿದ್ಧತೆ ನಡೆಸಿತ್ತು. ಚಿತ್ರಮಂದಿರಗಳಲ್ಲಿ ಶೇ 100ರಷ್ಟು ಪ್ರೇಕ್ಷಕರ ಭರ್ತಿಗೆ ಸರ್ಕಾರ ಅವಕಾಶ ನೀಡಿ ಆದೇಶ ಹೊರಡಿಸಬಹುದು ಎಂದು ಚಿತ್ರತಂಡವು ಕಾಯುತ್ತಿತ್ತು.

ಆದರೆ ಸರ್ಕಾರ ಈ ಕುರಿತು ಯಾವುದೇ ನಿರ್ಧಾರವನ್ನು ಇಲ್ಲಿಯವರೆಗೂ ತೆಗೆದುಕೊಳ್ಳದೇ ಇರುವುದರಿಂದ ಹಾಗೂ ಸೆಪ್ಟೆಂಬರ್‌ನಲ್ಲಿ ‘ಸಲಗ’, ‘ಭಜರಂಗಿ–2’ ಮುಂತಾದ ಬಿಗ್‌ ಬಜೆಟ್‌ ಚಿತ್ರಗಳು ತೆರೆಗೆ ಬರುವ ಕಾರಣದಿಂದ ಆಗಸ್ಟ್‌ 27ರಂದೇ ಚಿತ್ರದ ಮರು ಬಿಡುಗಡೆಗೆ ನಿರ್ಧರಿಸಲಾಗಿದೆ.

‘ಕಳೆದ ಏಪ್ರಿಲ್ 16ರಂದು ಬಿಡುಗಡೆಯಾದ ನಮ್ಮ ಕೃಷ್ಣ ಟಾಕೀಸ್ ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯ ಪ್ರೇಕ್ಷಕರಿಂದ ಲಭ್ಯವಾಗಿತ್ತು. ಆ.27ರಂದು ಚಿತ್ರದ ರಿ–ರಿಲೀಸ್‌ ಮಾಡುತ್ತಿದ್ದೇವೆ. ಮರಳಿ ಯತ್ನವ ಮಾಡು ಎನ್ನುವಂತೆ, ಲಾಕ್‌ಡೌನ್ ಮುಗಿದ ನಂತರದ ಮತ್ತೊಂದು ಪ್ರಯತ್ನ ನಮ್ಮದು’ ಎಂದು ಚಿತ್ರದ ನಿರ್ದೇಶಕ ವಿಜಯಾನಂದ್‌ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು