ಬೆಂಗಳೂರು ; ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ರಾಜಕೀಯ ರಂಗ ಪ್ರವೇಶಿಸುತ್ತಿರುವ ಐಏಎಸ್ , ಐಪಿಎಸ್ ಅಧಿಕಾರಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮಿಳುನಾಡಿನ ಅರವಕುರಿಚಿಯಿಂದ ಸ್ಪರ್ಧಿಸಿ ಸೋತಿದ್ದರು. ಸೋತ ನಂತರ ಅವರನ್ನು ತಮಿಳುನಾಡಿನ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ.
ಇದೀಗ ಅಣ್ಣಾ ಮಲೈ ಹಾದಿಯನ್ನೇ ಮತ್ತೋರ್ವ ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ್ ತುಳಿಯಲು ಹೊರಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಡಿಯಾದ ರವಿ ಚನ್ನಣ್ಣನವರ್, ಇವರು ಈಗ ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ಚರ್ಚೆ ಮುನ್ನಲೆಗೆ ಬಂದಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವ ಬಿಎಲ್. ಸಂತೋಷ್ ಅವರನ್ನು ಕಳೆದ ಮಂಗಳವಾರ ದೆಹಲಿಯಲ್ಲಿ ರವಿ ಡಿ ಚನ್ನಣ್ಣನವರ್ ಭೇಟಿಯಾಗಿ ಪಕ್ಷ ಸೇರುವ ಕುರಿತು ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ವಿಶೇಷವೇನೆಂದ ಈ ವೇಳಗೆ ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕೂಡ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ಮಾಡಲು ಅವರು ಕೂಡ ದೆಹಲಿಯಲ್ಲಿದ್ದರು. ಈ ವೇಳೆಯೇ ರವಿ ಚನ್ನಣ್ಣನವರ್ ಬಿಜೆಪಿ ವರಿಷ್ಠರನ್ನು ಭೇಟಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೊಳ್ಳೇಗಾಲ ಶಾಸಕ ಎನ್ .ಮಹೇಶ್ ಕೂಡ ಪಕ್ಷಕ್ಕೆ ಸೇರುವ ಮುನ್ನ ದೆಹಲಿಯಲ್ಲಿ ಬಿಎಲ್. ಸಂತೋಷ್ ಅವರನ್ನು ಭೇಟಿಯಾಗಿದ್ದರು. ತದನಂತರ ಅವರು ಬಿಜೆಪಿಗೆ ಸೇರುವುದಾಗಿ ಘೋಷಿಸಿಕೊಂಡದ್ದು ಗಮನಿಸಿದರೆ ಇಲ್ಲಿ ದೊಡ್ಡ ರಾಜಕೀಯ ಬೆಳೆವಣಿಗೆ ಗರಿಗೆದರಿದಂತೆ ಕಾಣಿಸುತ್ತಿದೆ.ಈಗಾಗಲೇ ಸರ್ಕಾರಿ ಪರೀಕ್ಷೆ ಕುರಿತು ಅನೇಕ ಮಾಹಿತಿಯನ್ನು ಯುವಜನರಿಗೆ ಸಾಮಾಜಿಕ ತಾಣಗಳಲ್ಲಿ ಮಾಹಿತಿ ನೀಡಿ ಅವರಿಗೆ ಪ್ರೇರಣೆ ಬೆಂಬಲ ನೀಡಿ ಹುರಿದುಂಬಿಸುವ ಮಾತುಗಳನ್ನಾಡಿ ರವಿ ಚನ್ನಣ್ಣನವರ್ ಜನಮನ್ನಣೆ ಪಡೆದುಕೊಂಡಿದ್ದಾರೆ. ಸಮಾಜಿಕ ಜಾಲತಾಣದಲ್ಲಿ ಅವರು ಮಾತಾಡಿದ ಅನೇಕ ವಿಡಿಯೋ, ವೈರಲ್ ಆಗಿವೇ. ಮತ್ತು ಹೆಚ್ಚು ಸೋಷಿಯಲ್ ಮೀಡಿಯಾದಲ್ಲಿ ಸಕ್ರಯರಾಗಿದ್ದು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.
ಹಳೆ ಮೈಸೂರಿನ ಭಾಗದಲ್ಲಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದಾರೆ ಎನ್ನಲಾಗಿದ್ದು, ತಮ್ಮ ಇಮೇಜ್ ಬಳಸಿಕೊಂಡು ಬಿಜೆಪಿಯ ಬೆಂಬಲದಿಂದ ವಿಧಾನ ಸೌಧ ಪ್ರವೇಶಿಸಲಿದ್ದಾರೆಯೇ ಎಂದು ಕಾದು ನೋಡಬೇಕಿದೆ.