News Karnataka Kannada
Monday, April 29 2024
ಕರ್ನಾಟಕ

ಏಕ ವಚನದಲ್ಲೇ ಬೈದಾಡಿಕೊಂಡ ಸಂಸದ ಮತ್ತು ಶಾಸಕ

Basavaraj Srinivas
Photo Credit :

ತುಮಕೂರು, ;- ಚೆಕ್‍ಡ್ಯಾಂ ಯೋಜನೆಗೆ ಸಂಬಂಧಪಟ್ಟಂತೆ ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು ಮತ್ತು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ನಡುವೆ ಏಕವಚನದಲ್ಲಿ ಜಟಾಜಟಿ ನಡೆದಿದ್ದು ಸಾರ್ವಜನಿಕರ ಎದುರೇ ಜಗಳವಾಡಿಕೊಂಡಿದ್ದಾರೆ. ಗುಬ್ಬಿ ತಾಲ್ಲೂಕಿನ ಸಿ.ನಂದಿಹಳ್ಳಿ ಗ್ರಾಮದಲ್ಲಿ ಬೆಸ್ಕಾಂ ಎಂಎಸ್‍ಎಸ್ ಘಟಕ ಉದ್ಘಾಟನೆಯಲ್ಲಿ ಶಾಸಕರು, ಸಂಸದರು ಭಾಗವಹಿಸಿದ್ದರು. ಈ ವೇಳೆ ಚೇಳೂರು ಚೆಕ್‍ಡ್ಯಾಂ ನಿರ್ಮಾಣಕ್ಕಾಗಿ ಭೂ ಸ್ವಾಧೀನದಲ್ಲಿ ಜಮೀನು ಕಳೆದುಕೊಳ್ಳುವ ರೈತರಿಗೆ ಒಂದು ಕೋಟಿ ಪರಿಹಾರ ಕೊಡಿಸುವುದಾಗಿ ಸಂಸದರು ಹೇಳಿದ್ದರು ಎನ್ನಲಾಗಿದೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಶಾಸಕ ಶ್ರೀನಿವಾಸ್ ಅವರು, ಯೋಜನೆಯೇ ಇಲ್ಲ, ಹಣವೇ ಇಲ್ಲ. ಪರಿಹಾರ ಎಲ್ಲಿಂದ ಕೊಡಿಸುವುದು, ರೈತರಿಗೆ ಸುಳ್ಳು ಹೇಳಬೇಡಿ. ಅವರು ನಮ್ಮ ಮನೆ ಬಾಗಿಲಿಗೆ ಬಂದು ಪರಿಹಾರ ಕೇಳಿದರೆ ಎಲ್ಲಿಂದ ತಂದುಕೊಡುವುದು ಎಂದು ತಿರುಗೇಟು ನೀಡಿದ್ದರು. ಆಗ ಸಿಟ್ಟುಗೆದ್ದ ಸಂಸದ ಬಸವರಾಜು ಅವರು ನಿನಗೆ ಏನು ಗೊತ್ತಿಲ್ಲ.ಸುಮ್ಮನಿರು ಎಂದು ಅಸಂಸದೀಯ ಪದ ಬಳಕೆ ಮಾಡಿ ನಿಂದಿಸಿದರು ಎನ್ನಲಾಗಿದೆ.
ಇದರಿಂದ ರೊಚ್ಚಿಗೆದ್ದ ಶ್ರೀನಿವಾಸ್ ಅವರು, ನಿನಗೆ ವಯಸ್ಸಾಗಿದೆ. ಯೋಗ್ಯತೆಗಿಷ್ಟು ಬೆಂಕಿ ಹಾಕ, ಸುಳ್ಳು ಹೇಳುವುದನ್ನು ನಿಲ್ಲಿಸು ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸಂಸದ ಬಸವರಾಜು ಅವರು ಕುರ್ಚಿಯಿಂದ ಎದ್ದು ಶ್ರೀನಿವಾಸ್ ಅವರ ಮೇಲೇರಿ ಹೋಗಿದ್ದಾರೆ. ಇಬ್ಬರು ನಾಯಕರು ಪರಸ್ಪರ ಆಕ್ರಮಣಕಾರಿ ಮನೋಭಾವ ಪ್ರದರ್ಶಿಸಿದ್ದು, ಕೈ ಕೈ ಮಿಲಾಯಿಸುವ ಹಂತ ತಲುಪಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು