ಶಿವಮೊಗ್ಗ: ಪ್ರೀತಿಸಿ ಮದುವೆಯಾದ ಎಂಜಿನಿಯರಿಂಗ್ ಯುವತಿ ಲವ್ ಜಿಹಾದ್ ಗೆ ಸಿಲುಕಿದ್ದಾಳೆ ಎಂದು ಯುವತಿಯ ಪೋಷಕರು ದೂರಿದ್ದಾರೆ.
ಶಿವಮೊಗ್ಗದ ಸಂಗೀತ ವಿದ್ವಾನ್ ಅರವಿಂದ್ ಹೆಗಡೆ- ಆಶಾ ದಂಪತಿಯ ಪುತ್ರಿ ಅನುಷಾ ಹೆಗಡೆ ಲವ್ ಜಿಹಾದ್ ಗೆ ಸಿಲುಕಿರುವ ಯುವತಿ. ಮನೆಯವರ ವಿರೋಧದ ನಡುವೆಯು ಜಾವೀದ್ ಖಾನ್ ಎಂಬ ಯುವಕನ ಜತೆ ಅನುಷಾ ಮದುವೆಯಾಗಿದ್ದರು. ಆದರೆ ಆತನಿಗೆ ಈ ಹಿಂದೆಯೇ 2 ಮದುವೆಯಾಗಿದೆ ಎಂದು ಅನುಷಾ ಪೋಷಕರ ಬಳಿ ಈಚೆಗೆ ಹೇಳಿಕೊಂಡಿದ್ದಾರೆ. ನಮ್ಮ ಮಗಳಿಗೆ ಮೋಸ ಮಾಡಿದ್ದಾನೆ ಎಂದು ತಂದೆ-ತಾಯಿ ಆರೋಪ ಮಾಡುತ್ತಿದ್ದಾರೆ.
ಆಕೆಯನ್ನು ಮನೆಗೆಲಸದವಳಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.
ಮದುವೆಯಾದ ನಂತರ ಮೊಬೈಲ್ ಕೂಡ ನೀಡಿಲ್ಲ. ಒಂದು ವರ್ಷದಲ್ಲಿ ಯಾವುದೇ ರೀತಿಯಾದಂತಹ ಸಂಪರ್ಕದಲ್ಲಿ ಇರಲಿಲ್ಲ. ಕಳೆದ 15 ದಿನಗಳಲ್ಲಿ ತಾಯಿ ಮನೆಗೆ ಬಂದ ಅನುಷಾ ಮನೆಯವರ ಬಳಿ ಜಾವೀದ್ ಗೆ ಎರಡು ಮದುವೆಯಾಗಿದೆ, ಮೊದಲ ಹೆಂಡತಿಯರ ಮಕ್ಕಳನ್ನುನೋಡಿಕೊಳ್ಳಲು ನನಗೆ ಹೇಳುತ್ತಾನೆ. ಸರಿಯಾಗಿ ಊಟ ಕೂಡ ಹಾಕಲ್ಲ ಎಂದು ಹೇಳಿಕೊಂಡಿದ್ದಾಳೆ. ಕೆಲ ದಿನಗಳ ನಂತರ ಮನೆಗೆ ಬಂದ ಆಕೆಯನ್ನು ಮತ್ತೇ ಕರೆದುಕೊಂಡು ಹೋಗಿದ್ದಾನೆ. ಇದೀಗ ಜಾವೀದ್ ವಿರುದ್ಧ ಕೇಸ್ ಮಾಡಿದ್ದಾರೆ.