News Karnataka Kannada
Saturday, May 18 2024
ಕರ್ನಾಟಕ

ಉತ್ತರ ಕನ್ನಡ‌ ಜಿಲ್ಲೆಯ ಭಟ್ಕಳ ಹೊರತು ಪಡಿಸಿ ಉಳಿದ ಕಡೆ ಯಾಂತ್ರಿಕೃತ‌ ಮೀನುಗಾರಿಕೆಗೆ ಅವಕಾಶ

Photo Credit :

ಉತ್ತರ ಕನ್ನಡ‌ ಜಿಲ್ಲೆಯ ಭಟ್ಕಳ ಹೊರತು ಪಡಿಸಿ ಉಳಿದ ಕಡೆ ಯಾಂತ್ರಿಕೃತ‌ ಮೀನುಗಾರಿಕೆಗೆ ಅವಕಾಶ

ಕಾರವಾರ: ಜಿಲ್ಲೆಯ ಜನರಿಗೆ ಅಗತ್ಯ ಸೇವೆಗಳನ್ನು ಒದಗಿಸಲು ಆಹಾರ ಸುರಕ್ಷತೆಯ ದೃಷ್ಟಿಯಿಂದ ಮೀನುಗಾರಿಕಾ ಸಂಘ ಸಂಸ್ಥೆ ಅಧಿಕಾರಿಗಳೊಂದಿಗೆ ಚರ್ಚಿಸಿ ಜಿಲ್ಲೆಯ ಕರಾವಳಿಯಲ್ಲಿ ಮೀನುಗಾರಿಕೆ(ಭಟ್ಕಳ ಹೊರತುಪಡಿಸಿ) ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ನೀಡಿದ್ದಾರೆ.

ಕೊರೊನಾ ಅಗತ್ಯ ಕ್ರಮಗಳನ್ನು ನಿರ್ದೇಶನದ ಪ್ರಕಾರ ಮೀನುಗಾರರು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಯಾಂತ್ರಿಕೃತ ಬೋಟುಗಳಲ್ಲಿ ಮೀನುಗಾರಿಕೆ ಇಲಾಖೆ ಸಂಬಂಧಪಟ್ಟ ಇಲಾಖೆಗೆ ನೀಡಬೇಕು. ಇಲಾಖೆ ಸೂಚಿಸಿದ ನಿಯಮಗಳನ್ನು ಪಾಲನೆ ಮಾಡದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಮೀನುಗಾರಿಕೆಗೆ ಹೊರಡಲು ಹೆಚ್ಚಿಸಿರುವ ಮತ್ತು ಸಿದ್ಧರಿರುವ ಮಾಲೀಕರು ತಮ್ಮ ಮಾಹಿತಿಗಳನ್ನು ಮೀನುಗಾರಿಕಾ ಅಧಿಕಾರಿಗಳಿಗೆ ಸಲ್ಲಿಸಬೇಕು ಆ ಬಳಿಕವೇ ಅನುಮತಿ ನೀಡಲಾಗುವುದು. ಯಾಂತ್ರಿಕೃತ ಬೋಟ್ ಗಳಲ್ಲಿ ಮೀನುಗಾರಿಕೆಗೆ ತೆರಳುವ ಮೀನುಗಾರರು ಆರೋಗ್ಯ ಇಲಾಖೆಯಿಂದ ಆರೋಗ್ಯ ತಪಾಸಣೆ ಮಾಡಿಕೊಂಡಿರಬೇಕು. ಸುರಕ್ಷತೆ ದೃಷ್ಟಿಯಿಂದ ಇದು ಮುಖ್ಯವಾಗಿದ್ದು ಎಲ್ಲರೂ ಈ ನಿಯಮಗಳನ್ನು ಪಾಲಿಸಬೇಕಾಗಿದೆ. ಪರವಾನಗಿ ಪಡೆದುಕೊಂಡ ಕೋಟಿ ಅವರು ಜಿಲ್ಲೆಯ ಸಮುದ್ರ ವ್ಯಾಪ್ತಿಯಲ್ಲಿ ಮೀನುಗಾರಿಕೆ ಮಾಡಬೇಕು. ಮೀನುಗಾರರು ದಾಖಲೆಗಳನ್ನು ಸಲ್ಲಿಸುವ ಪೂರ್ವದಲ್ಲಿನ ದಾಖಲೆಗಳನ್ನು ಆಧಾರ್ ಕಾರ್ಡ್, ಬಯೋಮೆಟ್ರಿಕ್ ಕಾರ್ಡ್, ಭೋಟಿಯ ದಾಖಲೆ ಸೇರಿದಂತೆ ಎಲ್ಲಾ ದಾಖಲೆಗಳನ್ನು ಸಂಬಂಧಪಟ್ಟ ಕೋಟಿಯಲ್ಲಿ ಇಟ್ಟುಕೊಳ್ಳಬೇಕು ತನಿಕೆ ನಡೆಸುವ ಸಂದರ್ಭದಲ್ಲಿ ಅವುಗಳನ್ನು ಹಾಜರುಪಡಿಸಬೇಕು.

ಕೋವಿಡ್ – 19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ರಾಜ್ಯ ಸರ್ಕಾರದಿಂದ ಆಗಾಗ ಹೊರಡಿಸಲಾದ ಮಾರ್ಗಸೂಚಿಯನ್ನು ಮೀನುಗಾರರು ಮಾಡಬೇಕು. ಇದು ದೋಣಿಯ ಮಾಲೀಕರಾಗಿದ್ದಾರೆ ಎಲ್ಲಾ ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಸರ್ ಹ್ಯಾಂಡ್ ವಾಶ್ ವ್ಯವಸ್ಥೆಯನ್ನು ಅಗತ್ಯವಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಮೀನುಗಾರಿಕಾ ಬಂದರುಗಳಲ್ಲಿ ಬೋಟ್ ಗಳಿಗೆ ಐಸ್, ನೀರು, ಡೀಸೆಲ್ ತುಂಬುವಾಗ ಕನಿಷ್ಠ ಜನರನ್ನು ನೇಮಿಸಿಕೊಳ್ಳಬೇಕು ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ದೋಣಿಯನ್ನು ಖಾಲಿ ಮಾಡುವ ಬಗ್ಗೆ ಮೀನುಗಾರಿಕಾ ಸಂಘ-ಸಂಸ್ಥೆಗಳು ಜವಾಬ್ದಾರಿ ವಹಿಸಿಕೊಳ್ಳಬೇಕು. ಅನುಮತಿ ಪಡೆದ ಕೋಟಿಯ ಯಾವುದೇ ಕಾರ್ಮಿಕರು ಸಮುದ್ರದಲ್ಲಿ ಇನ್ನೊಂದು ಕೋಟಿಯ ಕಾರ್ಮಿಕರೊಂದಿಗೆ ಯಾವುದೇ ರೀತಿಯ ಭೌತಿಕ ಸಂಪರ್ಕ ಕೊಳ್ಳುವಂತಿಲ್ಲ ಜೊತೆಗೆ ವಸ್ತುಗಳ ಬದಲಾವಣೆಯನ್ನು ಮಾಡಿಕೊಳ್ಳಬಾರದು ಎಂದು ಸೂಚಿಸಿದ್ದು, ಮೀನುಗಾರಿಕೆಯಲ್ಲಿ ತೊಡಗಿಕೊಂಡ ಕಾರ್ಮಿಕರು ತಲೆನೋವು, ಜ್ವರ, ಮೈಕೈನೋವು, ಉಸಿರಾಟದ ಸಮಸ್ಯೆ, ಮೂಗು ಕಟ್ಟುವುದು, ಶೀತ ಗಂಟಲು ನೋವಿನಂತಹ ಆರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ ಕೂಡಲೇ ಸ್ಥಳೀಯ ಮೀನುಗಾರಿಕಾ ಅಧಿಕಾರಿಗೆ ಅಥವಾ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿ, ಮೀನುಗಾರಿಕೆಯನ್ನು ಬಿಟ್ಟು ನಿಗದಿತ ಬಂದರು ಅಥವಾ ಇಳಿದಾಣ ಕೇಂದ್ರಗಳಿಗೆ ಕೂಡಲೇ ಇಂತಹ ಸಂದರ್ಭದಲ್ಲಿ ಹಿಡಿದ ಮೀನನ್ನು ಸಮುದ್ರಕ್ಕೆ ಎಸೆಯಬಾರದು.

ಹೋಟೆಲ್ ಮಾಲೀಕರು ಕನಿಷ್ಠ ಕಾರ್ಮಿಕರನ್ನು ಬಳಸಿಕೊಂಡು ಮೀನುಗಾರಿಕೆ ಹಾಗೂ ಸಾಗಾಟ ನಡೆಸಬೇಕು ಮೀನುಗಳನ್ನು ಇಳಿಸುವಾಗ ಸಾಮಾಜಿಕ ಅಂತರವನ್ನು ಪಾಲನೆ ಮಾಡಬೇಕು. ಪರವಾನಗಿ ಪಡೆದ ಬೋಟಿಗಳು ಹಿಡಿದ ಮೀನನ್ನು ಸ್ಥಳೀಯವಾಗಿ ಮಾರಾಟ ಮಾಡಿ ಬಾಕಿ ಉಳಿದ ಮೀನನ್ನು ಹೊರ ರಾಜ್ಯದಲ್ಲಿರುವ ಸಂಸ್ಕರಣಾ ಘಟಕಗಳಿಗೆ ಸಾಗಿಸಬಹುದು ಎಂದು ಜಿಲ್ಲಾಧಿಕಾರಿ ಸೂಚನೆ‌ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು