ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಮಹಿಳೆಯರು, ರೈತರು, ಯುವಕರು, ಅಲ್ಪ ಸಂಖ್ಯಾತರು ಹಾಗೂ ವಿಶೇಷವಾಗಿ ದಲಿತ ಪರ ಬಜೆಟ್ ಎಂದು ಪ್ರಚಾರ ಸಮಿತಿ ಅದ್ಯಕ್ಷ ಹಿರೇಮಗಳೂರು ರಾಮಚಂದ್ರ ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ನಿರುದ್ಯೋಗ ಯುವಕ ಯುವತಿಯವರಿಗೆ ಈಗಾಗಲೇ ಪ್ರವಾಸೋಧ್ಯಮ ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಇಲಾಖೆಯಿಂದ ಲಘು ವಾಹನ(ಪ್ರವಾಸಿ ಟ್ಯಾಕ್ಸಿ) ನೀಡುತ್ತಿದ್ದು, ಈ ಸಾಲಿನ ಬಜೆಟ್ನಲ್ಲಿ ಪರಿಶಿಷ್ಟ ಯುವಕರಿಗೆ ಭಾರಿ ವಾಹನ ತರಬೇತಿ ನೀಡಿ ಶೇ 0 %ನಲ್ಲಿ 15 ಲಕ್ಷ ಸಾಲ ನೀಡಲು ನಿರ್ಧರಿಸುವುದು ಹಾಗೂ ಪರಿಶಿಷ್ಟ ಜಾತಿಯ ಗುತ್ತಿಗೆದಾರರಿಗೆ 50 ಲಕ್ಷದಿಂದ 1 ಕೋಟಿ ರೂ. ಮೀಸಲು ಮಾಡಿರುವುದು ಸ್ವಾಗತಾರ್ಹ.
ಈಗಾಗಲೇ ಹಲವಾರು ಭಾಗ್ಯ ಯೋಜನೆಗಳನ್ನು ನೀಡಿರುವ ಮುಖ್ಯ ಮಂತ್ರಿಗಳು ಮಹಿಳೆಯರಿಗೆ ಅನುಕೂಲವಾಗುವಂತೆ ಅನಿಲಭಾಗ್ಯ ಯೋಜನೆ ಜಾರಿಗೆ ತಂದಿದ್ದು, ರಾಜ್ಯದಲ್ಲಿ 30 ಲಕ್ಷ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಲಿದ್ದಾರೆ. ಮೊದಲನೇ ಹಂತದಲ್ಲಿ 10 ಲಕ್ಷ ಮಹಿಳೆಯುರಿಗೆ ಉಪಯೋಗವಾಗಲಿದೆ. ಇದಕ್ಕೆ ಸರ್ಕಾರ ಗ್ಯಾಸ್ ಸ್ಟವ್, ಹಾಗೂ ಭರ್ತಿಯಾದ 2 ಸಿಲಿಂಡರ್ಗಳು ಸೇರಿ 4254 ರೂ. ರಾಜ್ಯ ಸರ್ಕಾರ ವೆಚ್ಚ ಮಾಡುತ್ತಿದೆ ಎಂದು ಪ್ರಚಾರ ಸಮಿತಿ ಅಧ್ಯಕ್ಷ ಹಿರೇಮಗಳೂರು ರಾಮಚಂದ್ರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.