ಬೆಂಗಳೂರು: ಇವತ್ತು ನಾವೆಲ್ಲರೂ ಕ್ರಾಂತಿಕಾರಿ ಹೆಜ್ಜೆಯನ್ನಿಡುವ ದಿನ. ರಾಷ್ಟ್ರೀಯ ಶಿಕ್ಷಣ ನೀತಿ-2020ರ ಮೂಲಕ ದೇಶದಲ್ಲಿ ಬದಲಾವಣೆಯನ್ನು ತರಬಹುದು ಎಂಬ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇವತ್ತು ಮಕ್ಕಳಿಗೆ ಸ್ವಾತಂತ್ರ್ಯ ದಿನದ ರೀತಿಯ ಭಾವನೆ ಬರುತ್ತಿದೆ, ಅದು ಕೋವಿಡ್ ನಿಂದ ಮುಕ್ತಿ ದಿನ. ಆಗಸ್ಟ್ 15ಕ್ಕೆ ಸ್ವಾತಂತ್ರ್ಯ ದಿನಾಚರಣೆ ಮಾಡಿದರೂ ಇವತ್ತು ಮಕ್ಕಳಿಗೆ ನಿಜವಾದ ಸ್ವಾಂತಂತ್ರ್ಯ ಸಿಕ್ಕಿದೆ ಎಂಬ ಭಾವನೆ ನನ್ನದು. ಇದು ಯಶಸ್ವಿಯಾದರೆ ಆಗಸ್ಟ್ 23 ಶಿಕ್ಷಣ ದಿನ ಎಂದು ಆಚರಿಸುತ್ತೇವೆ ಎಂದು ಹೇಳಲು ನಾನು ಇಚ್ಛಿಸುತ್ತೇನೆ ಎಂದರು.