ಮೈಸೂರು: ವಿದ್ಯಾರ್ಥಿಗಳು, ಸಾರ್ವಜನಿಕರು ಪರಿಸರ ಹಾಗೂ ನಿಮ್ಮ ಸುತ್ತಮುತ್ತಗಳಲ್ಲಿ ಇರುವ ಕಾಡುಗಳ ಬಗ್ಗೆ ಕಾಳಜಿವಹಿಸಿ. ಹೆಚ್ಚಾಗಿ ಗಿಡಗಳನ್ನು ಬೆಳೆಸುವ ಆಸಕ್ತಿ ಬೆಳೆಸಿಕೊಳ್ಳಬೇಕು. ಇದರ ಜೊತಗೆ ಅರಣ್ಯಗಳ ರಕ್ಷಣೆಯಲ್ಲಿ ಕೈಜೋಡಿಸಬೇಕು ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ ಹೇಳಿದರು.
ವಸ್ತು ಪ್ರದರ್ಶನ ಆವರಣದಲ್ಲಿ ನಡೆದ ವಿಶ್ವ ಅರಣ್ಯ ದಿನಾಚರಣೆ ಅಂಗವಾಗಿ ನಡೆದ ಅರಣ್ಯ ಅರಿವು ಕಾರ್ಯಕ್ರಮದಲ್ಲಿ ವಿವಿಧ ಜಾತಿಯ ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಇದು ಹಲವು ಕಡೆಗಳಲ್ಲಿ ಅರಣ್ಯಗಳಿಗೆ ಬೆಂಕಿ ಬೀಳುವುದರಿಂದ ಅರಣ್ಯದಲ್ಲಿ ಇರುವ ಪಕ್ಷಿ, ಪ್ರಾಣಿಗಳು ನಾಶವಾಗುತ್ತಿವೆ ಇವುಗಳನ್ನು ನಾವುಗಳು ತಡೆಗಟ್ಟಬೇಕು. ಅರಣ್ಯ ನಾಶದಿಂದ ಪರಿಸರದ ಮೇಲೆ ಆಗುವ ದುಷ್ಟರಿಣಾಮ ಹಾಗೂ ದೊಡ್ಡ ಬದಲಾವಣೆಗಳ ಆಗುತ್ತವೆ. ಅರಣ್ಯಗಳ ಕೊಡುಗೆ ದೊಡ್ಡದ್ದಿದೆ ಎಂದು ಸಲಹೆ ನೀಡಿದರು.
ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳು, ಯುವಜನರ ಪಾತ್ರ ಅತ್ಯಂತ ಮಹತ್ವಾಗಿದ್ದು, ದೇಶದ ಜವಾಬ್ದಾರಿಯಾಗಿದ್ದು ಪರಿಸರದ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಬೇಕಾಗಿದೆ, ಮನುಷ್ಯನ ದುರಾಸೆಯಿಂದಾಗಿ ಇಡೀ ಪ್ರಕೃತಿ ಆಪತ್ತಿನ ಅಂಚಿಗೆ ಹೋಗುತ್ತಿದೆ. ಸಂಪನ್ಮೂಲಗಳು, ಎಷ್ಟೇ ಹೇರಳವಾಗಿದ್ದರೂ ಸಮರ್ಪಕ ಬಳಕೆಯ ಕೊರತೆಯಿಂದಾಗಿ ಇಂದು ಅನೇಕ ಅವಘಡಗಳಿಗೆ ಅವಕಾಶವಾಗುತ್ತದೆ. ಪ್ರಕೃತಿಯಲ್ಲಿ ಎಲ್ಲವೂ ತನಗೊಬ್ಬನಿಗಾಗಿಯೇ ಇವೆ ಎಂಬ ಮಾನವನವ ಧೋರಣೆಯಿಂದಾಗಿ ಇನ್ನಿಲ್ಲದ ಸಮಸ್ಯೆಗಳು ಸೃಷ್ಟಿಯಾಗುತ್ತಿದೆ. ಹೀಗಾಗಿ ನಾವುಗಳು ಸರಿಯಾಗಿ ಗಿಡಮರಗಳನ್ನು ಬೆಳೆಸಲು ಮುಂದಾಗಬೇಕು ಅಂದಾಗ ಮಾತ್ರ ನಾಡು ಉಳಿಸಲು ಸಾಧ್ಯವಾಗಲ್ಲಿದೆ. ಅರಣ್ಯಗಳು ಮಾನವನಿಗೆ ಹಲವಾರು ಕಾಣಿಕೆಗಳನ್ನು ನೀಡುತ್ತಿವೆ. ಈ ಬಗ್ಗೆ ಎಲ್ಲರೂ ಕಾಳಜಿ ವಹಿಸಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಹೇಮಂತಕುಮಾರ್ ಗೌಡ, ನಗರ ಪಾಲಿಕಾ ಸದಸ್ಯರಾದ ಛಾಯಾದೇವಿ, ಬಿಜೆಪಿ ವ್ಯಾಪಾರಿ ಪ್ರಕೋಷ್ಠದ ಸಂಚಾಲಕರಾದ ರಾ ಪರಮೇಶ್ ಗೌಡ, ಬಿಜೆಪಿ ಯುವ ಮುಖಂಡರಾದ ಮಂಜು ಸಿ ಗೌಡ, ನವೀನ್, ಎಸ್ ಎನ್ ರಾಜೇಶ್, ಶ್ರೀನಿವಾಸ್, ಮರಿಸ್ವಾಮಿ, ಸುನೀಲ್, ಸುಬ್ರಹ್ಮಣ್ಯ ಇನ್ನಿತರರು ಹಾಜರಿದ್ದರು