News Karnataka Kannada
Wednesday, May 15 2024
ಕರ್ನಾಟಕ

ಯಕ್ಷಗಾನ ಹರಕೆ ಸಲ್ಲಿಸಿದ ಅನಂತಕುಮಾರ್ ಹೆಗಡೆ

Photo Credit :

ಯಕ್ಷಗಾನ ಹರಕೆ ಸಲ್ಲಿಸಿದ ಅನಂತಕುಮಾರ್ ಹೆಗಡೆ

ಕಾರವಾರ: ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತಾ ಸಚಿವ ಅನಂತಕುಮಾರ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಯಕ್ಷಕಾಶಿ ಗುಂಡಬಾಳಕ್ಕೆ ಮಗ ಅಶುತೋಷ, ಮಗಳು ವೃಶಾಲಿ ಅವಳೊಂದಿಗೆ ಆಗಮಿಸಿ ಯಕ್ಷಗಾನ ಹರಕೆ ತೀರಿಸಿದರು.

ಒಂದೇ ಸ್ಥಳದಲ್ಲಿ ಪ್ರತಿವರ್ಷ 150ಕ್ಕೂ ಹೆಚ್ಚು ಬಯಲಾಟ ಸೇವೆ ನಡೆಯುವ ಜಗತ್ತಿನ ಏಕೈಕ ರಂಗಸ್ಥಳ ಗುಂಡಬಾಳ. ಇಲ್ಲಿ ಆಟ ಆಡುವುದು, ಆಡಿಸುವುದು, ನೋಡುವುದು ಒಂದು ಸೇವೆ.  ರಂಗಸ್ಥಳಕ್ಕೆ ಹೋಗಿ ನಾಮದ ಹರಕೆ ತಿಲಕವನ್ನು ಹಚ್ಚಿಕೊಂಡು ಬಂದರೂ ಅದೂ ಸೇವೆಯ ಭಾಗವಾಗಿದೆ. ಅಂತಹ ಯಕ್ಷಗಾನ ಪ್ರಿಯ ಗುಂಡಬಾಳ ಮುಖ್ಯಪ್ರಾಣನ ಚರಣದಲ್ಲಿ ಅನಂತಕುಮಾರ ಹೆಗಡೆ ದಂಪತಿಗಳು ಯಕ್ಷಗಾನ ಹರಕೆ ತೀರಿಸಿದರು.

ಯಕ್ಷಗಾನ ರಂಗಮಂದಿರದಲ್ಲಿ ಶ್ರೀಗಣಪತಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ಮುಖ್ಯಪ್ರಾಣನ ಸನ್ನಿಧಿಯಲ್ಲಿ ವಸಂತ ಪೂಜೆ, ಮಹಾಮಂಗಳಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸಿದರು. ನಂತರ ಅನಂತಕುಮಾರ ಹೆಗಡೆ ರಂಗಸ್ಥಳದಲ್ಲಿ ಕುಟುಂಬದ ಸದಸ್ಯರೊಂದಿಗೆ ಯಕ್ಷಗಾನ ನಾಮದ ಹರಕೆ ಹಾಕಿಸಿಕೊಂಡರು.

ಈ ಸಂದರ್ಭದಲ್ಲಿ  ಗೋಪಾಲಕೃಷ್ಣ ಭಟ್, ಶಾಸಕ ಸುನೀಲ ನಾಯ್ಕ, ದೇವಿದಾಸ ರಾಮಚಂದ್ರ ಭಟ್, ಬಿಜೆಪಿ ಮುಖಂಡರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು