ಕಾರವಾರ: ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಆಪ್ತ ಕೃಷ್ಣ ಎಸಳೆ ಮನೆಗೆ ಮಂಗಳವಾರ ಐಟಿ ಅಧಿಕಾರಿಗಳು ಹಠಾತ್ ದಾಳಿ ನಡೆದಿದೆ.
ಜತೆಗೆ ಬಿಜೆಪಿ ಗ್ರಾಮೀಣ ಘಟಕಾಧ್ಯಕ್ಷ ಆರ್. ವಿ. ಹೆಗಡೆ ಚಿಪಗಿಯವರ ಮನೆಗೂ ಇದೇ ಸಂದರ್ಭದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆದಿದೆ.
ಹುಬ್ಬಳ್ಳಿಯಿಂದ ಬಂದ ಅಧಿಕಾರಿಗಳು ಎರಡೂ ಕಡೆಗೆ ಏಕ ಕಾಲಕ್ಕೆ ದಾಳಿ ನಡೆಸಿ ಮಹತ್ವದ ದಾಖಲೆಗೆ ಶೋಧ ನಡೆಸುತ್ತಿದ್ದು, ಮನೆಯಲ್ಲಿ ಹಣ ಇದೆಯೇ ಎನ್ನುವ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.