ಕಾಸರಗೋಡು: ಪೆರುಂಬಳ ಬಳಿಯ ವಯಲಾಂಕುಳಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ವಿದ್ಯಾನಗರ ಠಾಣಾ ಪೊಲೀಸರು 25 ಟನ್ ಮರಳನ್ನು ವಶಪಡಿಸಿಕೊಂಡಿದ್ದು, ತಂಡವು ಪರಾರಿಯಾಗಿದೆ.
ಹೊಳೆ ಸಮೀಪದ ಖಾಸಗಿ ವ್ಯಕಿಯೋರ್ವರ ಹಿತ್ತಿಲಿನಲ್ಲಿ ಮರಳನ್ನು ದಾಸ್ತಾನಿಡಲಾಗಿತ್ತು. ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ದಾಳಿ ನಡೆಸಲಾಯಿತು.
ಈ ಹಿಂದೆ ಕೂಡಾ ಇಲ್ಲಿಂದ ಅಕ್ರಮ ಮರಳನ್ನು ವಶಪಡಿಸಿಕೊಳ್ಳಲಾಗಿತ್ತು.