News Karnataka Kannada
Thursday, May 09 2024
ಯುಎಇ

ಡಿ.10 ರಂದು ದುಬೈ ದಸರಾ, ಕ್ರೀಡಾರತ್ನ ಪ್ರಶಸ್ತಿ ಪ್ರದಾನ ಸಮಾರಂಭ

ಹೆಮ್ಮೆಯ ದುಬೈ ಕನ್ನಡ ಸಂಘ ಯುಎಇ ವತಿಯಿಂದ 6 ನೇ ವರ್ಷದ ದುಬೈ ದಸರಾ ಕಾರ್ಯಕ್ರಮ (ಕ್ರೀಡೆ ಮತ್ತು ಸಾಂಸ್ಕೃತಿಕ ಹಬ್ಬ) ಮತ್ತು ದುಬೈ ಕ್ರೀಡಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಡಿ.12ರಂದು ಬೆಳಗ್ಗೆ 8ರಿಂದ ರಾತ್ರಿ 10 ಗಂಟೆವರೆಗೆ ಎತಿಸಲಾತ್‌ ಸ್ಪೋರ್ಟ್‌ ಅಕಾಡೆಯಮಿಯಲ್ಲಿ ನಡೆಯಲಿದೆ.
Photo Credit : News Kannada

ದುಬೈ: ಹೆಮ್ಮೆಯ ದುಬೈ ಕನ್ನಡ ಸಂಘ ಕನ್ನಡಿಗರ ಧ್ವನಿಯಾಗಿ ಯುಎಇ ದೇಶದಲ್ಲಿ ೨೦೧೫ ರಿಂದ ಕನ್ನಡ ನಾಡು ನುಡಿ ಸಂಸ್ಕೃತಿ ಆಗುಹೋಗು ಬಗ್ಗೆ ಕನ್ನಡಿಗರಲ್ಲಿ ಜಾಗೃತಿ ಮೂಡಿಸುತ್ತಿದೆ .ದಸರಾ ಕ್ರೀಡೋತ್ಸವ , ಸಾಂಸ್ಕೃತಿಕೋತ್ಸವ , ಸರ್ವಧರ್ಮ ಇಫ್ತಾರ್ ಕೂಟ ಸಂಕ್ರಾಂತಿ ,ಕ್ರಿಸ್ಮಸ್ , ಕನ್ನಡ ರಾಜ್ಯೋತ್ಸವ, ಗಣರಾಜ್ಯೋತ್ಸವ ಪ್ರತಿಭಾ ಸ್ಪರ್ಧೆಗಳ ಮೂಲಕ ಕನ್ನಡಿಗರನ್ನು ಭಾಷೆ, ನೆಲದ ಮೇಲೆ ಒಲುಮೆ ಮೂಡಿಸುತಿದ್ದಾರೆ.

ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ೬ನೆ ಬಾರಿಗೆ ದುಬೈ ದಸರಾ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕೋತ್ಸವ ೨೦೨೩ ದಸರಾ ಕಪ್ ಕ್ರಿಕೆಟ್ , ಚೆಸ್, ಬ್ಯಾಡ್ಮಿಂಟನ್ , ಫುಟ್ಬಾಲ್, ವಾಲಿಬಾಲ್ , ಅಥ್ಲೆಟಿಕ್ಸ್, ಥ್ರೋಬಾಲ್, ಕೊಕೋ, ಕಬಡ್ಡಿ, ಹಗ್ಗ ಜಗ್ಗಾಟ, ಮೂಲಕ ಮಕ್ಕಳು, ಮಹಿಳೆಯರು ಮತ್ತು ಪುರುಷರ ಎಲ್ಲಾ ವಯಸ್ಕರಿಗೂ ಕ್ರೀಡಾ ರಂಜನೆಯ ಅವಕಾಶ ಮಾಡಿಕೊಟ್ಟಿದ್ದಾರೆ .ಅಂತ್ಯಾಕ್ಷರಿ, ಕನ್ನಡ ರಸಪ್ರಶ್ನೆ, ಗೊಂಬೆ ಸ್ಪರ್ಧೆ, ಕವಿಗೋಷ್ಠಿ ಸಾಹಿತ್ಯಾಸಕ್ತರ ಮನ ತಣಿಸಲಿವೆ, ಹಾಗೆ ರಂಗೋಲಿ ಸ್ಪರ್ಧೆ ಮತ್ತು ದಸರಾ ಗೊಂಬೆ ಸ್ಪರ್ಧೆ ಸಾಂಸ್ಕ್ರತಿಕ ಲೇಪ ನೀಡಲಿದೆ.

ದಸರಾ ಕಪ್ ಕ್ರಿಕೆಟ್ ಪುರುಷರಿಗೆ ಮತ್ತು ಮಹಿಳೆಯರಿಗೆ ಫೈನಲ್ ಪಂದ್ಯಗಳು ೧೯ ನವೆಂಬರ್ ನಂದು ನಡೆದು ಪ್ರೇಕ್ಷಕರ ಮನಗೆದ್ದವು , ಹರ್ಷೋದ್ಘಾರದೊಂದಿಗೆ ಕ್ರೀಡಾಪ್ರೇಮಿಗಳು ವೀಕ್ಷಿಸಿದರು.

೧೦ ಡಿಸೆಂಬರ್ ೨೦೨೩ರಂದು ದುಬೈಯ ಎಟಿಸಲಾತ್ ಅಕಾಡೆಮಿ ನಡೆಯುವ ಕ್ರೀಡೋತ್ಸವಕ್ಕೆ ಎಲ್ಲಾ ಕ್ರೀಡಾಪಟುಗಳು ಮತ್ತು ಸಾಂಸ್ಕೃತಿಕ ಸ್ಪರ್ಧೆ ಸ್ಪರ್ಧಿಗಳು ಕಾತುರದಿಂದ ತಮ್ಮ ಪ್ರತಿಭೆಯನ್ನು ತೋರಲು ಕಾತುರರಾಗಿ ಕಾಯುತಿದ್ದಾರೆ.ಚಂದನವನದ ತಾರೆಗಳಾದ ಶ್ರೀ. ಹೇಮಂತ್, ಶ್ರೀ. ಹರ್ಷವರ್ಧನ್, ಶ್ರೀ. ರಾಹುಲ್ ಡಿಟ್ಟೋ , ಕು. ದಿವ್ಯ ಸಂಗೀತ ಸಂಜೆ ಮೂಲಕ ರಂಜಿಸಲಿದ್ದಾರೆ . ದುಬೈನ ರಾಜಮನೆತನದವರು ಅತಿಥಿಗಳಾಗಿ ಸಮಾರಂಭಕ್ಕೆ ಆಗಮಿಸಲು ಸಮ್ಮತಿಸಿ ತಮ್ಮ ಅಪೂರ್ವ ಬೆಂಬಲ ಸೂಚಿಸಿದ್ದಾರೆ.

ವಾರ್ಷಿಕ ‘ದುಬೈ ಕ್ರೀಡಾ ರತ್ನ ‘ ಪುರಸ್ಕಾರ ಡಾ.ಮಾಲತಿ ಕೃಷ್ಣಮೂರ್ತಿ ಹೊಳ್ಳ, ಅರ್ಜುನ ಪ್ರಶಸ್ತಿ ವಿಜೇತೆ, ಒಲಿಂಪಿಕ್ ಪ್ಯಾರಾ ಅಥ್ಲೀಟ್ ಮತ್ತು ಶ್ರೀ. ದೊಡ್ಡ ಗಣೇಶ್ , ಭಾರತೀಯ ಕ್ರಿಕೆಟ್ ತಾರೆ ಇವರಿಗೆ ಸನ್ಮಾನಿಸಲಾಗುವುದು . ಶ್ರೀಮತಿ. ಅಶ್ವಿನಿ ನಾಚಪ್ಪ, ಡಾ. ಸಿ.ಹೊನ್ನಪ್ಪ ಗೌಡ, ಶ್ರೀ.ಎಸ್.ವಿ. ಸುನಿಲ್ ಈ ಪ್ರಶಸ್ತಿಯ ಪೂರ್ವ ಪುರಸ್ಕೃತರು.

ದಸರಾ ಕಾರ್ಯಕ್ರಮದ ಪೋಸ್ಟರ್, ವಿವರ , ಟೀಶರ್ಟ್ ಹೆಮ್ಮೆಯ ದುಬೈ ಕನ್ನಡ ಸಂಘ ನವೆಂಬರ್ ೨೫ ರಂದು ಬಿಡುಗಡೆಗೊಳಿಸಿತು . ಸಭೆಯಲ್ಲಿ ಅಧ್ಯಕ್ಷ ಮಧು ದಾವಣಗೆರೆ, ಉಪಾಧ್ಯಕ್ಷೆ ಹಾದಿಯ ಮಂಡ್ಯ,ಮುಖ್ಯ ಕಾರ್ಯದರ್ಶಿ ರಫೀಕ್ ಅಲಿ ಕೊಡಗು, ಮಮತಾ ಮೈಸೂರು , ಸುದೀಪ್ ದಾವಣಗೆರೆ, ಪಲ್ಲವಿ ದಾವಣಗೆರೆ, ವಿಷ್ಣು ಮೂರ್ತಿ ಮೈಸೂರು , ಡಾ. ಸವಿತಾ ಮೈಸೂರು, ಅನಿತಾ ಬೆಂಗಳೂರು, ಶಂಕರ್ ಬೆಳಗಾವಿ , ಮೊಹಿದ್ದೀನ್ ಹುಬ್ಬಳ್ಳಿ, ವರದರಾಜ್ ಕೋಲಾರ , ಅಕ್ರಮ್ ಕೊಡಗು, ಚೇತನ್ ಬೆಂಗಳೂರು, ನಜೀರ ಮಂಡ್ಯ, ಸ್ವಾತಿ ಚಿತ್ರದುರ್ಗ, ಹಾದಿ ಕುಂದಾಪುರ, ರಜಿನಿ ಬೆಂಗಳೂರು , ಪ್ರತಾಪ್ ಮಡಿಕೇರಿ ಮತ್ತು ಉಪಸಮಿತಿ ಸದಸ್ಯರು ಉಪಸ್ಥಿತರಿದ್ದು ಈ ಕಾರ್ಯಕ್ರಮಕ್ಕೆ ಯುಎಇ ದೇಶದ ಎಲ್ಲ ಕನ್ನಡಿಗರಿಗೆ ಆತ್ಮೀಯ ಸ್ವಾಗತ ಕೋರಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು