ದುಬೈ: ಜಾಗತಿಕ ಲಿಂಗಾಯುತ ಮಹಾಸಭಾ ಸಾಗರೋತ್ತರ ಘಟಕದ ವತಿಯಿಂದ 889ನೇ ಬಸವ ಜಯಂತಿ ಕಾರ್ಯಕ್ರಮ ಮೇ 7ರ ಶನಿವಾರದಂದು ಸಂಜೆ 7ಕ್ಕೆ ಭಾರತ, 5.30ಕ್ಕೆ ದುಬೈ ಹಾಗೂ 2.30ಕ್ಕೆ ಲಂಡನ್ನಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಗದಗ ತೋಂಟದಾರ್ಯ ಸಂಸ್ಥಾನ ಮಠದ ಶ್ರೀ ಮ.ನಿ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ಶ್ರೀಮತಿ ವಿದ್ಯಾ ಮಗದುಮ ಆದರ್ಶ ಸುಗಮ ಸಂಗೀತ ತಂಡದಿಂದ ವಚನಗಾಯನ ಕಾರ್ಯಕ್ರಮ ನೆರವೇರಲಿದೆ.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ನಿಕಟಪೂರ್ವ ಮುಖ್ಯಮಂತ್ರಿ ಸಿದ್ಧರಾಮಯ್ಯ, ಅಧ್ಯಕ್ಷರಾಗಿ ನಿಕಟಪೂರ್ವ ಗೃಹ ಸಚಿವ ಹಾಗೂ ನೀರಾವರಿ ಸಚಿವರು ಡಾ. ಎಂ. ಬಿ ಪಾಟೀಲ ಹಾಗೂ ಸ್ವಾಗತ ಭಾಷಣವನ್ನು ಶಿವಾನಂದ ಜಾಮದಾರ್ ಮಾಡಲಿದ್ದಾರೆ.
ಜಾಗತಿಕ ಲಿಂಗಾಯುತ ಮಹಾಸಭೆ ಸಾಗರೋತ್ತರ ಘಟಕದ ಕಾರ್ಯಕಾರಿಣಿ ಸಮಿತಿಯ ಅಧ್ಯಕ್ಷ ಪ್ರಕಾಶ ಉಳ್ಳೆಗಡ್ಡಿ, ಉಪಾಧ್ಯಕ್ಷ ರಾವಂದೂರ ಶಿವಕುಮಾರ, ದುಬೈ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಲಿಂಗದಳ್ಳಿ, ಖಜಾಂಚಿ ಬಸವಪಾಟೀಲ, ಸಮನ್ವಯ ಮತ್ತು ಸಂಹವನ ಭೀಮ ಹಂಗರಗೆ, ಕಾರ್ಯದರ್ಶಿ ಹೇಮೆಗೌಡ ರುದ್ರಪ್ಪ, ಉಪ ಖಜಾಂಚಿ ಮಲ್ಲಿ ಕಾರ್ಜುನ ರಾಮನಹಳ್ಳಿ, ದುಬೈ, ಮಸ್ಕತ್, ಯು.ಎ.ಇ ಸಂಪರ್ಕ ಸತೀಶ ಭದ್ರಣ್ಣ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಖ್ಯಾತ ಜಾನಪದ ಗಾಯಕರು ಗುರುರಾಜ ಹೊಸಕೋಟೆ ಭಾಗಿಯಾಗಲಿದ್ದಾರೆ. ನುಡಿದರೆ ಮುತ್ತಿನ ಹಾರದಂತಿರಬೇಕು ಚಿಂತನೆ ಕಾರ್ಯಕ್ರಮವನ್ನು ಡಾ. ರಹಮತ ತರೀಕೆರೆ, ಡಾ. ಶಾಂತಾ ಅಪ್ಟಗಿ, ಡಾ. ಎಸ್. ಈ. ಸಿದ್ಧರಾಮಯ್ಯ ಹಾಗೂ ಡಾ. ಶೀಲಾದೇವಿ ಮಳೀಮಠ ನೆರವೇರಿಸಿ ಕೊಡಲಿದ್ದಾರೆ.
ಕಾರ್ಯಕ್ರಮದಲ್ಲಿ ಹಲವಾರು ಅಂತರಾಷ್ಟ್ರೀಯ ಸಂಘಟನೆಗಳು ಭಾಗವಹಿಸಲಿದೆ. ನ್ಯೂಸ್ ಕರ್ನಾಟಕ ಯೂಟ್ಯೂಬ್ ಚಾನೆಲ್ ಹಾಗೂ ನ್ಯೂಸ್ ಕರ್ನಾಟಕ ಫೇಸ್ಬುಕ್ ಪೇಜ್ನಲ್ಲಿ ಲೈವ್ ಸ್ಟೀಮಿಂಗ್ ಆಗಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಇ- ಸರ್ಟಿಫಿಕೇಟ್ ಕೊಡಲಾಗುತ್ತದೆ.