ಸೌದಿ ಅರೇಬಿಯಾ: ಗಲ್ಫ್ ಗಯ್ಸ್ ಸೆಂಟ್ರಲ್ ಕಮಿಟಿ ಮಲ್ಲೂರು ಹಾಗೂ ಗಲ್ಫ್ ಕಮಿಟಿ ಅಡ್ಡೂರು ಬುರೈದ ಇದರ ಜಂಟಿ ಆಶ್ರಯದಲ್ಲಿ ನಡೆದ ದಿನಾಂಕ ತಾರೀಖು 04/09/2022 ರಂದು ಆದಿತ್ಯವಾರ ಸೌದಿ ಅರೇಬಿಯಾದ ಬುರೈದ ಇಸ್ತ್ರದಲ್ಲಿ ಮಲ್ಲೂರು ಗ್ರಾಮದ ಹೆಮ್ಮೆಯ ನಾಯಕರು, ಮಾಜಿ ತಾಲೂಕು ಪಂಚಾಯತ್ ಸದಸ್ಯರು, ಸಮಾಜ ಸೇವಕರು, ಬಡವರ ಪಾಲಿನ ಆಶಾಕಿರಣ, ಎಲ್ಲರೊಂದಿಗೂ ಉತ್ತಮ ಒಡನಾಟ ಹೊಂದಿರುವಂತಹ ಸರಳ ಸಜ್ಜನಿಕೆಯ ವ್ಯಕ್ತಿ ಜನಾಬ್ ಎನ್.ಇ. ಮುಹಮ್ಮದ್ ಮಲ್ಲೂರು ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.
ಈ ಸಂಧರ್ಭದಲ್ಲಿ ಗಲ್ಫ್ ಗೈಸ್ ಸೆಂಟ್ರಲ್ ಕಮಿಟಿ ಮಲ್ಲೂರು ಇದರ ಅಧ್ಯಕ್ಷರಾದ ಉಮರ್ ಫಾರೂಕ್ ಮಲ್ಲೂರು, ಸದಸ್ಯರಾದ ಸಿದ್ದೀಕ್ ಮಲ್ಲೂರು,ಹಕೀಮ್ ಜಿ ಎ, ಇನ್ನೂ ಸಮಿತಿಯ ಅನೇಕ ಸದಸ್ಯರು ಉಪಸ್ಥಿತರಿದ್ದರು.
ಗಲ್ಫ್ ಕಮಿಟಿ ಅಡ್ಡೂರು ಬುರೈದ ಘಟಕದ ಅಧ್ಯಕ್ಷರಾದ ಅಬ್ದುಲ್ ರಝಾಕ್, ಉಪಾಧ್ಯಕ್ಷರಾದ ಡಿಎಸ್ ಅಶ್ರಫ್ , ಸಲಹೆಗಾರರಾದ ಜಿ ಎ ಮೊಹಮ್ಮದ್, ನೌಶಾದ್ ಪರಂಗಿಪೇಟೆ ಇಂಡಿಯನ್ ಸೋಶಿಯಲ್ ಫೋರಮ್ ಬುರೈದ ಇದರ ಅಧ್ಯಕ್ಷರಾದ ಅಯಾಝ್ ಕ್ರಿಷ್ಣಾಪುರ, ರವುಫು ಕಲಾಯಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.