News Karnataka Kannada
Friday, May 03 2024
ಹೊರನಾಡ ಕನ್ನಡಿಗರು

ರೂವಿಸ್: ಪುತ್ತಿಗೆ ಮಠಾಧೀಶರಿಗೆ ರೂವಿಸ್ ನಗರದಲ್ಲಿ ಭವ್ಯ ಸ್ವಾಗತ

Puthige seer gets a grand welcome in The City of Ruvis
Photo Credit : News Kannada

ರೂವಿಸ್:  ಪರ್ಯಾಯ ಸಂಚಾರ ನಿಮಿತ್ತ ಆಗಮಿಸಿದ ಉಡುಪಿ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರಿಗೆ ರೂವಿಸ್ ನಗರದಲ್ಲಿ ಭವ್ಯ ಸಾಂಪ್ರದಾಯಿಕ ಸ್ವಾಗತ ಮಾಡಿದ್ದರು.

ನೆರೆದ ನೂರಾರು ಭಕ್ತರಿಗೆ ಪುತ್ತಿಗೆ ಶ್ರೀಗಳು, ಭಗವದ್ಗೀತಾ ಲೇಖನ ದೀಕ್ಷಾ ಪ್ರದಾನ ಮಾಡಿದರು. ಉಡುಪಿಯ ಬ್ರಹ್ಮಾವರದ ಅಮ್ಮುಂಜೆ ಉದಯ ನಾಯಕ ಮೊದಲ ದೀಕ್ಷಾ ಸ್ವೀಕಾರ ಮಾಡಿದರು. ಈ ಸಂದರ್ಭದಲ್ಲಿ ಶ್ರೀಗಳಿಗೆ ಭವ್ಯ ಗೌರವಾರ್ಪಣೆ ಮಾಡಲಾಯಿತು. ಉಡುಪಿಯ ಶ್ರೀಪುತ್ತಿಗೆ ಶ್ರೀಗಳ ಆಗಮನದಿಂದ ರೂವಿಸ್ ನಗರದಲ್ಲಿ ಉತ್ಸವದ ವಾತಾವರಣ ನಿರ್ಮಾಣಗೊಂಡಿದೆ.

ರೂವಿಸ್ ನಗರ ಅಬುದಾಭಿಯ ಪಕ್ಕದ ನಗರವಾಗಿದ್ದು, ಸೌದಿ ದೇಶದ ಗಡಿಯಲ್ಲಿದೆ. ಇಲ್ಲಿ ಸಾವಿರಾರು ಮಂದಿ ಭಾರತೀಯರು ನೆಲೆಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು