News Karnataka Kannada
Friday, May 03 2024
ಹೊರನಾಡ ಕನ್ನಡಿಗರು

ದುಬೈಯಲ್ಲಿ ನೂರೇ ಅಜ್ಮೀರ್ ಆಮಂತ್ರಣ ಪತ್ರಿಕೆ ಅನಾವರಣ

Nooray Ajmer invitation card unveiled in Dubai
Photo Credit : News Kannada

ದುಬೈ : ಎಸ್ ಕೆ ಎಸ್ ಎಸ್ ಎಫ್ ಯು ಎ ಇ ಸಮಿತಿ ಹಾಗು ವಿಖಾಯ ಯು ಎ ಇ ಜಂಟಿ ಆಶ್ರಯದಲ್ಲಿ ದುಬೈ ವುಮೆನ್ಸ್ ಅಸೋಸಿಯೇಷನ್ ದೇರಾ ದಲ್ಲಿ  2022 ಸೆಪ್ಟೆಂಬರ್ 18 ರಂದು ನಡೆಯಲಿರುವ  ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮ  ಸ್ಪೂರ್ತಿದಾಯಕ ಪಯಣ ಎರಡನೇ ವಾರ್ಷಿಕ ಸಮಾರಂಭದ ಆಮಂತ್ರಣ ಪತ್ರಿಕೆ ಅನಾವರಣ ಕಾರ್ಯಕ್ರಮವು ಸಯ್ಯದ್ ಆಸ್ಕರ್ ಅಲಿ ತಂಙಲ್  ಕೋಲ್ಪೆ ರವರ ನಿವಾಸದಲ್ಲಿ ನಡೆಯಿತು.

ನೂರೇ  ಅಜ್ಮೀರ್ ಸ್ವಾಗತ ಸಮಿತಿ ಛೇರ್ಮನ್ ಸಿರಾಜ್ ಬಿಸಿ ರೋಡ್ ರವರು ಸಯ್ಯದ್ ಆಸ್ಕರ್ ಅಲಿ ತಂಙಲ್  ಕೋಲ್ಪೆ , ಅಬ್ದುಲ್ ಸಲಾಂ ಬಪ್ಪಳಿಗೆ , ಷರೀಫ್ ಕೊಡಿನೀರ್, ಬದ್ರುದ್ದೀನ್ ಹೆಂತಾರ್, ಸ್ವಾಗತ ಸಮಿತಿ ಕೋಶಾಧಿಕಾರಿ ಅಲಿ ಈಶ್ವರಮಂಗಿಲ  ರವರಿಗೆ ಆಮಂತ್ರಣ ಪತ್ರಿಕೆಯನ್ನು ಹಸ್ತಾಂತರಿಸುವ ಮೂಲಕ ಅನಾವರಣ ಗೊಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ  ಎಸ್ ಕೆ ಎಸ್ ಎಸ್ ಎಫ್ ವಿಖಾಯ ಯು ಎ ಇ ಛೇರ್ಮನ್ ನವಾಝ್ ಬಿಸಿ ರೋಡ್ ರವರು ಮಾತನಾಡುತ್ತಾ , ಉದ್ದೇಶಿತ ಕಾರ್ಯಕ್ರಮದಲ್ಲಿ ಸುಮಾರು ಒಂದು ಸಾವಿರಕ್ಕಿಂತಲೂ ಅಧಿಕ  ದೀನೀ ಸ್ನೇಹಿಗಳು ಭಾಗವಹಿಸುವ ನಿರೀಕ್ಷೆ ಇದ್ದು , ಅದಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ಸ್ವಾಗತ ಸಮಿತಿಯು ಮಾಡಿಕೊಂಡಿದ್ದು,  ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮ ಕಾರ್ಯಕ್ರಮವು ಯು ಎ ಇ ಯ ಚರಿತ್ರೆಯಲ್ಲಿ ಬರೆದಿಡಬೇಕಾದ ಕಾರ್ಯಕ್ರಮವಾಗಿ ಬದಲಾಯಿಸಲು ತಾವೆಲ್ಲರು  ಸಹಕರಿಸುವಂತೆ ಕೇಳಿಕೊಂಡರು.

ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಸಯ್ಯದ್ ಆಸ್ಕರ್ ಅಲಿ ತಂಙಲ್  ಕೋಲ್ಪೆ ಮಾತನಾಡುತ್ತಾ, ನೂರೇ ಅಜ್ಮೀರ್  ಕಾರ್ಯಕ್ರಮವು ಪ್ರಥಮವಾಗಿ ಯು ಎ ಇ  ಯಲ್ಲಿ ಆಯೋಜಿಸುತ್ತಿದ್ದು , ಹಲವಾರು ದೀನೀ ಸ್ನೇಹಿಗಳು ಸಂಗಮಿಸುವ ಮಹಾ ಕಾರ್ಯಕ್ರಮವಾಗಿದ್ದು , ಉದ್ದೇಶಿಸಿದಂತೆ ಉತ್ತಮವಾಗಿ ಮೂಡಿ ಬರಲಿ ಎಂದು ಶುಭ ಹಾರೈಸಿದರು.

ನೂರೇ ಅಜ್ಮೀರ್  ಸ್ವಾಗತ ಸಮಿತಿ ಛೇರ್ಮನ್ ಸಿರಾಜ್ ಬಿಸಿ ರೋಡ್ ರವರು ಕಾರ್ಯಕ್ರಮದ ರೂಪುರೇಷ, ಕಾರ್ಯ ಯೋಜನೆಗಳ ಕುರಿತು ವಿವರಿಸಿ ಸರ್ವರ ಸಹಕಾರವನ್ನು ಕೋರಿದರು. ಈ ಸಂಧರ್ಭದಲ್ಲಿ , ಅಶ್ರಫ್  ತಂಙಲ್  ಉದ್ಯಾವರ ,   ಅಝೀಝ್ ಸೊಂಪಾಡಿ, , ನವಾಝ್ ಕಟ್ಟತ್ತಾರ್, ಅಕ್ಬರ್ ಹಂಡೇಲ್ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅಝೀಝ್ ಸೊಂಪಾಡಿ ಸ್ವಾಗತಿಸಿ ನವಾಝ್ ಕಟ್ಟತ್ತಾರ್ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು