ದುಬೈ : ಎಸ್ ಕೆ ಎಸ್ ಎಸ್ ಎಫ್ ಯು ಎ ಇ ಸಮಿತಿ ಹಾಗು ವಿಖಾಯ ಯು ಎ ಇ ಜಂಟಿ ಆಶ್ರಯದಲ್ಲಿ ದುಬೈ ವುಮೆನ್ಸ್ ಅಸೋಸಿಯೇಷನ್ ದೇರಾ ದಲ್ಲಿ 2022 ಸೆಪ್ಟೆಂಬರ್ 18 ರಂದು ನಡೆಯಲಿರುವ ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮ ಸ್ಪೂರ್ತಿದಾಯಕ ಪಯಣ ಎರಡನೇ ವಾರ್ಷಿಕ ಸಮಾರಂಭದ ಆಮಂತ್ರಣ ಪತ್ರಿಕೆ ಅನಾವರಣ ಕಾರ್ಯಕ್ರಮವು ಸಯ್ಯದ್ ಆಸ್ಕರ್ ಅಲಿ ತಂಙಲ್ ಕೋಲ್ಪೆ ರವರ ನಿವಾಸದಲ್ಲಿ ನಡೆಯಿತು.
ನೂರೇ ಅಜ್ಮೀರ್ ಸ್ವಾಗತ ಸಮಿತಿ ಛೇರ್ಮನ್ ಸಿರಾಜ್ ಬಿಸಿ ರೋಡ್ ರವರು ಸಯ್ಯದ್ ಆಸ್ಕರ್ ಅಲಿ ತಂಙಲ್ ಕೋಲ್ಪೆ , ಅಬ್ದುಲ್ ಸಲಾಂ ಬಪ್ಪಳಿಗೆ , ಷರೀಫ್ ಕೊಡಿನೀರ್, ಬದ್ರುದ್ದೀನ್ ಹೆಂತಾರ್, ಸ್ವಾಗತ ಸಮಿತಿ ಕೋಶಾಧಿಕಾರಿ ಅಲಿ ಈಶ್ವರಮಂಗಿಲ ರವರಿಗೆ ಆಮಂತ್ರಣ ಪತ್ರಿಕೆಯನ್ನು ಹಸ್ತಾಂತರಿಸುವ ಮೂಲಕ ಅನಾವರಣ ಗೊಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಸ್ ಕೆ ಎಸ್ ಎಸ್ ಎಫ್ ವಿಖಾಯ ಯು ಎ ಇ ಛೇರ್ಮನ್ ನವಾಝ್ ಬಿಸಿ ರೋಡ್ ರವರು ಮಾತನಾಡುತ್ತಾ , ಉದ್ದೇಶಿತ ಕಾರ್ಯಕ್ರಮದಲ್ಲಿ ಸುಮಾರು ಒಂದು ಸಾವಿರಕ್ಕಿಂತಲೂ ಅಧಿಕ ದೀನೀ ಸ್ನೇಹಿಗಳು ಭಾಗವಹಿಸುವ ನಿರೀಕ್ಷೆ ಇದ್ದು , ಅದಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ಸ್ವಾಗತ ಸಮಿತಿಯು ಮಾಡಿಕೊಂಡಿದ್ದು, ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮ ಕಾರ್ಯಕ್ರಮವು ಯು ಎ ಇ ಯ ಚರಿತ್ರೆಯಲ್ಲಿ ಬರೆದಿಡಬೇಕಾದ ಕಾರ್ಯಕ್ರಮವಾಗಿ ಬದಲಾಯಿಸಲು ತಾವೆಲ್ಲರು ಸಹಕರಿಸುವಂತೆ ಕೇಳಿಕೊಂಡರು.
ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಸಯ್ಯದ್ ಆಸ್ಕರ್ ಅಲಿ ತಂಙಲ್ ಕೋಲ್ಪೆ ಮಾತನಾಡುತ್ತಾ, ನೂರೇ ಅಜ್ಮೀರ್ ಕಾರ್ಯಕ್ರಮವು ಪ್ರಥಮವಾಗಿ ಯು ಎ ಇ ಯಲ್ಲಿ ಆಯೋಜಿಸುತ್ತಿದ್ದು , ಹಲವಾರು ದೀನೀ ಸ್ನೇಹಿಗಳು ಸಂಗಮಿಸುವ ಮಹಾ ಕಾರ್ಯಕ್ರಮವಾಗಿದ್ದು , ಉದ್ದೇಶಿಸಿದಂತೆ ಉತ್ತಮವಾಗಿ ಮೂಡಿ ಬರಲಿ ಎಂದು ಶುಭ ಹಾರೈಸಿದರು.
ನೂರೇ ಅಜ್ಮೀರ್ ಸ್ವಾಗತ ಸಮಿತಿ ಛೇರ್ಮನ್ ಸಿರಾಜ್ ಬಿಸಿ ರೋಡ್ ರವರು ಕಾರ್ಯಕ್ರಮದ ರೂಪುರೇಷ, ಕಾರ್ಯ ಯೋಜನೆಗಳ ಕುರಿತು ವಿವರಿಸಿ ಸರ್ವರ ಸಹಕಾರವನ್ನು ಕೋರಿದರು. ಈ ಸಂಧರ್ಭದಲ್ಲಿ , ಅಶ್ರಫ್ ತಂಙಲ್ ಉದ್ಯಾವರ , ಅಝೀಝ್ ಸೊಂಪಾಡಿ, , ನವಾಝ್ ಕಟ್ಟತ್ತಾರ್, ಅಕ್ಬರ್ ಹಂಡೇಲ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಝೀಝ್ ಸೊಂಪಾಡಿ ಸ್ವಾಗತಿಸಿ ನವಾಝ್ ಕಟ್ಟತ್ತಾರ್ ವಂದಿಸಿದರು.