News Karnataka Kannada
Sunday, April 28 2024
ಮುಂಬೈ

ಥಾಣೆ: ಭಕ್ತರ ಭಜನಾ ಕಾರ್ಯಕ್ರಮಕ್ಕೆ ಅನುಗ್ರಹಿಸಿದ ಕೊಂಡೆವೂರುಶ್ರೀ

Thane: Kondevoorsri graces devotees' bhajan programme
Photo Credit : News Kannada

ಮುಂಬಯಿ: ಕಾಸರಗೋಡು ಉಪ್ಪಳ ಅಲ್ಲಿನ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಮಠಾಧಿಪತಿ ಶ್ರೀ ಯೋಗನಂದ ಸರಸ್ವತಿ ಸ್ವಾಮೀಜಿ ಅವರು ಇಂದಿಲ್ಲಿ ಉಪನಗರ ಥಾಣೆಗೆ ಪಾದಾರ್ಪಣೆಗೈದು ಶ್ರೀ ನಿತ್ಯಾನಂದ ಯೋಗಾಶ್ರಮ ಸಮಿತಿ ಮುಂಬಯಿ ಇದರ ಭಕ್ತರ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಗವಾನ್ ಶ್ರೀ ನಿತ್ಯಾನಂದ ಸ್ವಾಮಿ ಅವರಿಗೆ ಆರತಿ ಬೆಳಗಿಸಿ ಅನುಗ್ರಹಿಸಿದರು.

ಯೋಗಾಶ್ರಮ ಸಮಿತಿ ಮುಂಬಯಿ ಇದರ ಕಾರ್ಯದರ್ಶಿ ಹರೀಶ್ ಕೆ.ಚೇವಾರ್ ಅವರು ಥಾಣೆ ಕಾಪೂರ್ ಬಾವ್ಡಿ ಅಲ್ಲಿನ ಸಮಿತಿಯ ಕೋಶಾಧಿಕಾರಿ ಸದಸ್ಯ, ಭಾರತ್ ಬ್ಯಾಂಕ್‌ನ ಮಾಜಿ ನಿರ್ದೇಶಕ ಅಶೋಕ್ ಎಂ.ಕೋಟ್ಯಾನ್ ಅವರ ಕೋಸ್ಮಸ್ ಹಾಬಿಟಾಟ್ ನಿವಾಸದಲ್ಲಿ ಆಯೋಜಿಸಿದ್ದ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೆರೆದ ಭಗವದ್ಭಕ್ತರಿಗೆ ಹರಸಿದರು.

ಈ ಸಂದರ್ಭದಲಿ ಶ್ರೀ ನಿತ್ಯಾನಂದ ಯೋಗಾಶ್ರಮ ಸಮಿತಿ ಮುಂಬಯಿ ಸಮಿತಿಯ ಅಧ್ಯಕ್ಷ ರಾಜೇಶ್ ರೈ, ಮಾಜಿ ಗೌ|ಪ್ರ|ಕಾರ್ಯದರ್ಶಿ ನಿತ್ಯಾನಂದ ಡಿ.ಕೋಟ್ಯಾನ್, ತೋನ್ಸೆ ಸಂಜೀವ ಪೂಜಾರಿ, ಯಶೋಧಾ ಭಟ್ಟಿಪಾಡಿ, ರಮೇಶ್ ಕೋಟ್ಯಾನ್, ಜಯರಾಮ ಪೂಜಾರಿ, ಎಸ್.ಎಸ್ ಪೂಜಾರಿ.ಎಸ್.ಸುಧಾಕರ್, ಜಾನಕಿ ಅಶೋಕ್ ಕೋಟ್ಯಾನ್, ಅಜಯ್ ಎ. ಕೋಟ್ಯಾನ್, ಅಖಿಲ್ ಎ.ಕೋಟ್ಯಾನ್ ಸೇರಿದಂತೆ ಸಮಿತಿಯ ಅನೇಕ ಸದಸ್ಯರು, ಧಾರ್ಮಿಕ ಮುಂದಾಳುಗಳು ಪಾಲ್ಗೊಂಡು ಭಜನೆಗೈದರು. ಶ್ರೀಗಳು ಮಂತ್ರಾಕ್ಷತೆ, ಪ್ರಸಾದ ನೀಡಿ ಹರಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು