News Karnataka Kannada
Monday, May 06 2024
ಮುಂಬೈ

ಅಷ್ಟು ಸುಲಭವಿರಲಿಲ್ಲ ಸಿದ್ಧಾರ್ಥ್ ಶುಕ್ಲರ ಜೀವನ ಹಾದಿ

Siddharth Shukla 02092021
Photo Credit :

ಮುಂಬೈ : ಬಾಲಿವುಡ್ ನಟ ಸಿದ್ಧಾರ್ಥ್ ಶುಕ್ಲಾರ ಸಾವು ಎಲ್ಲರಿಗೂ ಆಘಾತವುಂಟುಮಾಡಿದೆ. ಸಿದ್ಧಾರ್ಥ್ ಶುಕ್ಲಾ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಹೇಳಲಾಗಿದೆ.ಸಿದ್ಧಾರ್ಥ್ ಟಿವಿ ಕಾರ್ಯಕ್ರಮ ಬಾಲಿಕಾ ವಧು ಮೂಲಕ  ಜನಪ್ರಿಯತೆಯನ್ನು ಗಳಿಸಿದರೂ, ಅವರು ಬಿಗ್ ಬಾಸ್ 13 ರ ವಿಜೇತರಾಗುವ ಮೂಲಕ ಹೆಚ್ಚು ಪ್ರಸಿದ್ಧರಾದರು.

ಮನೆಯಲ್ಲಿ  ಸಿದ್ಧಾರ್ಥ ಮೇಲೆ ಎಲ್ಲರಿಗೂ ಹೆಚ್ಚು ಪ್ರೀತಿ ಎಂದು ಬಿಗ್ ಬಾಸ್‌ಗೆ ಹೋದ ನಂತರ, ಅವರ ಅಕ್ಕ ಸಂದರ್ಶನವೊಂದರಲ್ಲಿ ಹೇಳಿದ್ದರು. ಸಿದ್ಧಾರ್ಥ್ ಯಾವಾಗಲೂ 3 ಜನರ ಕಾವಲಿನಲ್ಲಿರುತ್ತಾನೆ. ಆತನ ಇಬ್ಬರು ಹಿರಿಯ ಸಹೋದರಿಯರು ಮತ್ತು ತಾಯಿ ಯಾವಾಗಲೂ ಅವನ ಮೇಲೆ ಕಣ್ಣಿಟ್ಟಿದ್ದರು ಎಂದು ಹೇಳಿದ್ದರು.

ಸಿದ್ಧಾರ್ಥ್ ಶುಕ್ಲಾ ತನ್ನ ತಾಯಿ ರೀತಾಗೆ ತುಂಬಾ ಆಪ್ತರಾಗಿದ್ದರು. ತಂದೆಯ ಮರಣದ ನಂತರ, ತಾಯಿ ಅವರನ್ನು ಏಕಾಂಗಿಯಾಗಿ ಬೆಳೆಸಿದರು. ತಾಯಿ ಇಲ್ಲದೆ ಅವರು ಒಂದು ಕ್ಷಣವೂ ಬದುಕಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಕೆಲವು ವರ್ಷಗಳ ಹಿಂದೆ, ಹ್ಯೂಮನ್ಸ್ ಆಫ್ ಬಾಂಬೆಗೆ ನೀಡಿದ ಸಂದರ್ಶನದಲ್ಲಿ ಸಿದ್ಧಾರ್ಥ್ ತನ್ನ ತಾಯಿಯ ಹೋರಾಟದ ಬಗ್ಗೆ ಹೇಳಿದ್ದರು.

15 ವರ್ಷಗಳ ಹಿಂದೆ ತಂದೆ ತೀರಿಕೊಂಡಾಗ ಮನೆಯ ಸೂರು ನಮ್ಮ ತಲೆಯಿಂದ ಕಿತ್ತುಕೊಂಡಂತೆ ಭಾಸವಾಯಿತು. ಆದರೆ ನನ್ನ ತಾಯಿ  ಬೆಟ್ಟದಂತೆ ಬಲವಾಗಿ ಇದ್ದರು. ತಾಯಿ ತನ್ನನ್ನು ಸೋಲಲು ಬಿಡಲಿಲ್ಲ.

ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿರದಿದ್ದರೂ, ತಾಯಿ ಮೂರು ಮಕ್ಕಳನ್ನು ಚೆನ್ನಾಗಿ ಬೆಳೆಸಿದರು ಮತ್ತು ಎಲ್ಲಾ ಬೇಡಿಕೆಗಳನ್ನು ಪೂರೈಸಿದರು. ನಮ್ಮ ಬೇಡಿಕೆಯನ್ನು ಈಡೇರಿಸಲು ಅವರು ತನ್ನ ಅನೇಕ ಆಸೆಗಳನ್ನು ತ್ಯಾಗ ಮಾಡಿದರು ಎಂದು ತಾಯಿ ಬಗ್ಗೆ ಹೇಳಿದ್ದರು ಸಿದ್ಧಾರ್ಥ್ ಶುಕ್ಲಾ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು