ಮುಂಬಯಿ: ಈಗಾಗಲೇ ಕರಾವಳಿ ಜಿಲ್ಲೆಗಳಲ್ಲಿ ಸಿನಿ ಪ್ರಿಯರ ಮನಸ್ಸು ಸೂರೆಗೊಂಡಿರುವ ಕಡಂದಲೆ ಸುರೇಶ್ ಎಸ್. ಭಂಡಾರಿ ನಿರ್ಮಾಪರಾಗಿರುವ ನಾಗೇಶ್ವರ ಸಿನಿ ಕ್ರಿಯೇಷನ್ಸ್ ಲಾಂಛನದಡಿಯಲ್ಲಿ ನಿರ್ಮಾಣಗೊಂಡ ಅಂಬರ್ ಕ್ಯಾಟರರ್ಸ್ ಚಿತ್ರವು ಫೆ. 4ರಂದು ಮುಂಬಯಿಯ ಸಿನಿಮಾ ಮಂದಿರಗಳಲ್ಲಿ ತೆರೆ ಕಾಣಲಿದೆ.
ಮುಂಬಯಿಯಲ್ಲಿ ತುಳು ಕನ್ನಡಿಗರಿಗಾಗಿ ಉಪನಗರ ಥಾಣೆ ಪೂರ್ವನ ಆನಂದ್ ಟಾಕೀಸ್ ನಲ್ಲಿ ಫೆ.4ರಂದು ಬೆಳಗ್ಗೆ 9.15ಕ್ಕೆ ಮೊದಲ ಪ್ರದರ್ಶನ ಕಾಣಲಿದೆ. ಫೆ. 11ರಂದು ಬೆಳಗ್ಗೆ 9.15ಕ್ಕೆ ಉಪನಗರ ಥಾಣೆ ಪೂರ್ವದ ಆನಂದ್ ಟಾಕೀಸ್, ಡೊಂಬಿವಿಲಿ ತಿಲಕ್ ಟಾಕೀಸ್ ಮತ್ತು ಮುಲುಂಡ್ ಪಶ್ಚಿಮದ ಮೆಹುಲ್ ಟಾಕೀಸ್ ನಲ್ಲಿ ಪ್ರದರ್ಶನವಾಗಲಿದೆ.
ಅಂಬರ್ ಕ್ಯಾಟರರ್ಸ್ ಸಿನಿಮಾವನ್ನು ತುಳು ಕನ್ನಡಿಗರು ಬಂದು ನೋಡಿ ಹರಸಬೇಕು. ಇದರಿಂದ ಮುಂದೆ ಮತ್ತಷ್ಟು ಚಿತ್ರಗಳನ್ನು ನಿರ್ಮಿಸಲು ಪ್ರೋತ್ಸಾಹ ಲಭಿಸುವುದು ಎಂದು ನಿರ್ಮಾಪಕ ಕಡಂದಲೆ ಸುರೇಶ್ ಎಸ್. ಭಂಡಾರಿ ತಿಳಿಸಿದ್ದಾರೆ.