News Karnataka Kannada
Sunday, April 28 2024
ಹೊರನಾಡ ಕನ್ನಡಿಗರು

ಕನ್ನಡ ಕಲಿತು ವಚನ ಹೇಳಿದ ಇಟಲಿ ಮಹಿಳೆ

Photo Credit :

ಕನ್ನಡ ಕಲಿತು ವಚನ ಹೇಳಿದ ಇಟಲಿ ಮಹಿಳೆ

ಮೈಸೂರು: ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ವೆಬಿನಾರ್ ಮೂಲಕ ನಡೆದ ವಚನೋತ್ಸವ ಈ ಬಾರಿ ವಿಭಿನ್ನವಾಗಿತ್ತು. ಕಾರಣ ಇಟಲಿ ಪ್ರಜೆ ಕನ್ನಡ ಕಲಿತು ಮಾತನಾಡಿರುವುದು ಅಚ್ಚರಿಗೆ ಕಾರಣವಾಗಿದೆ.

ಕಾರ್ಯಕ್ರಮದಲ್ಲಿ ಇಟಲಿಯಲ್ಲಿರುವ ಕನ್ನಡಿಗರು ಹಾಗೂ ಕನ್ನಡದ ಬಗ್ಗೆ ಅಭಿಮಾನ ಇಟ್ಟುಕೊಂಡಿರುವ ಇಟಲಿಯ ಪ್ರಜೆ ಟಿಜಿಯಾನ ರಿಪೇಪಿ ಮಾತನಾಡಿ ಎ.ಕೆ.ರಾಮಾನುಜನ್‍ರವರು ವಚನಗಳನ್ನು ಆಂಗ್ಲಭಾಷೆಗೆ ಅನುವಾದ ಮಾಡಿರುವ ದಿ ಸ್ಪೀಕಿಂಗ್ ಆಫ್ ಶಿವ ಪುಸ್ತಕ ಓದಿ ವಚನಗಳ ಬಗ್ಗೆ ಒಲವು ಉಂಟಾಗಿ ಕನ್ನಡ ಕಲಿಯಬೇಕೆಂದೆನಿಸಿತು. ಹೀಗಾಗಿ ಕರ್ನಾಟಕಕ್ಕೆ ಬಂದೆ. ಕನ್ನಡ ನಾಡನ್ನು ನೋಡಿ ನನಗೆ ಸ್ವರ್ಗದ ಅನುಭವವಾಯಿತು. ಯಾವುದೇ ದೇಶದ ಸಾಂಸ್ಕೃತಿಕ ಹಿನ್ನೆಲೆಯನ್ನು ಅರಿಯಬೇಕಾದರೆ ಅಲ್ಲಿನ ಜನರ ಭಾಷೆ ಕಲಿಯಬೇಕು ಎಂದೆನೆಸಿ ಭಾರತದಲ್ಲಿ ಹಿಂದಿ, ಸಂಸ್ಕೃತ ಹಾಗೂ ಕನ್ನಡವನ್ನು ಕಲಿತೆ. ಕನ್ನಡ ಭಾಷೆ ಮಾತನಾಡಲು ಹೋದರೆ ಪ್ರೀತಿ ಉಕ್ಕಿ ಬರುತ್ತದೆ. ಇಟಲಿಯಲ್ಲಿರುವ ಕನ್ನಡಿಗರನ್ನು ಹುಡುಕಿಕೊಂಡು ಹೋಗಿ ಅವರ ಜೊತೆ ಆಗಾಗ ಕನ್ನಡ ಮಾತನಾಡುತ್ತಿರುತ್ತೇನೆ ಎಂದು ಒಂದು ಗಂಟೆಯ ಚರ್ಚೆಯಲ್ಲಿ ನಿರರ್ಗಳವಾಗಿ ಕನ್ನಡ ಮಾತನಾಡಿ ಅನೇಕ ವಚನಗಳನ್ನು ಹೇಳುವುದರ ಮುಖಾಂತರ ಕನ್ನಡಾಭಿಮಾನವನ್ನು ವ್ಯಕ್ತಪಡಿಸಿದರು. 

ಮೈಸೂರಿನಿಂದ ಇಟಲಿಗೆ ಹೋಗಿ ನೆಲೆಸಿರುವ ಜಯಮೂರ್ತಿ ಮತ್ತು ಇಟಲಿ ಕನ್ನಡ ಸಂಘದ ಅಧ್ಯಕ್ಷ ಮಧು ಹೇಮೆಗೌಡ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ಡಾ. ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿ  ಸಂವಾದದಲ್ಲಿ ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು