ಬೆಂಗಳೂರು: ಯುವಿಯೈಟಿಸ್‌ ಎಂಬುದು ಕಣ್ಣಿನ ಉರಿಯೂತದ ಒಂದು ವಿಧವಾಗಿದೆ. ಇದು ಐರಿಸ್, ಸಿಲಿಯರಿ ಬಾಡಿ, ಮತ್ತು ಕೋರಾಯ್ ಅನ್ನು ಒಳಗೊಂಡಿರುವ ಕಣ್ಣಿನ ಮಧ್ಯದ ಪದರದ ಮೇಲೆ ಪರಿಣಾಮ ಬೀರುತ್ತದೆ. ಇದು ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದು ಮತ್ತು ಇದನ್ನು ಆರಂಭದಲ್ಲಿಯೇ ಪತ್ತೆಹಚ್ಚಿ ಚಿಕಿತ್ಸೆ ನೀಡದಿದ್ದರೆ, ದೃಷ್ಟಿ ಕಳೆದುಕೊಳ್ಳುವ ಅಪಾಯವಿರುತ್ತದೆ.

ಅನೇಕ ಜನರಿಗೆ ಈ ಸಮಸ್ಯೆಯ ಬಗ್ಗೆ, ಅರಿವಿಲ್ಲ. ಕಣ್ಣು ಕೆಂಪಾಗುವುದು ನೋವು. ಮಂಜಾದ ದೃಷ್ಟಿ, ತೇಲುವ ಕಲೆಗಳು (ಕಪ್ಪು ಚುಕ್ಕೆಗಳು) ಮತ್ತು ಬೆಳಕಿನ ಸೂಕ್ಷ್ಮತೆಯಂತಹ ಆರಂಭಿಕ ರೋಗಲಕ್ಷಣಗಳನ್ನು ಹೆಚ್ಚಾಗಿ ನಿರ್ಲಕ್ಷಿಸಲಾಗುತ್ತದೆ, ಇದು ಶಾಶ್ವತ ದೃಷ್ಟಿ ಹಾನಿಗೆ ಕಾರಣವಾಗುತ್ತದೆ. ಈ ಸಮಸ್ಯೆಯ ಬಗ್ಗೆ, ಜಾಗೃತಿ ಮೂಡಿಸಲು ಏಪ್ರಿಲ್ 10 ರಂದು ಜಾಗತಿಕವಾಗಿ ಆಚರಿಸಲಾಗುವ ‘ವಿಶ್ವ ಯುವಿಯೈಟಿಸ್‌ ದಿನ’ದ ಸಂದರ್ಭದಲ್ಲಿ ಪ್ರಪಂಚದಾದ್ಯಂತದ ತಜ್ಞರು ಒಗ್ಗೂಡಿ ಆರಂಭಿಕ ರೋಗಲಕ್ಷಣಗಳನ್ನು ಗುರುತಿಸುವ ಹಾಗೂ ಸಕಾಲಿಕ ಚಿಕಿತ್ಸೆ ಪಡೆಯುವ ಪ್ರಾಮುಖ್ಯತೆಯ ಬಗ್ಗೆ, ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದಾರೆ.

ಬೆಂಗಳೂರಿನ ನಾರಾಯಣ ನೇತ್ರಾಲಯದ ನಿರ್ದೇಶಕರಾದ ಡಾ. ನರೇನ್ ಶೆಟ್ಟಿ ಅವರು ಹೇಳುವಂತೆ, “ರೋಗದ ಬಗೆಗಿನ ಜಾಗೃತಿಯೇ ಚಿಕಿತ್ಸೆಯ ಮೊದಲ ಹಂತವಾಗಿದೆ, ಮತ್ತು ಸಕಾಲಿಕ ಆರೈಕೆಯು ದೃಷ್ಟಿಯನ್ನು ಸಂರಕ್ಷಿಸಲು ಹಾಗೂ ಮುಂದಾಗಬಹುದಾದ ತೊಡಕುಗಳನ್ನು ತಡೆಯಲು ಸಹಾಯ ಮಾಡುತ್ತದೆ.”

ಈ ಜಾಗತಿಕ ಉಪಕ್ರಮವನ್ನು ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು ಬೆಂಬಲಿಸುತ್ತಿವೆ ಮತ್ತು ‘ಯುವಿಯೈಟಿಸ್‌ ಸೊಸೈಟಿ ಆಫ್ ಇಂಡಿಯಾ’ ಕೂಡ ಸಹಯೋಗಿ ಸಂಸ್ಥೆಯಾಗಿ ಸಕ್ರಿಯವಾಗಿ ಭಾಗವಹಿಸುತ್ತಿದೆ. ನಾರಾಯಣ ನೇತ್ರಾಲಯದ ಯುವಿಟಿಸ್‌ ಮತ್ತು ಅಕ್ಯುಲರ್ ಇಮ್ಯುನೊಲೊಜಿ ವಿಭಾಗದ ಮುಖ್ಯಸ್ಥರು, ಸಲಹೆಗಾರರು ಹಾಗೂ ಯುವಿಯೈಟಿಸ್‌ ಸೊಸೈಟಿ ಆಫ್ ಇಂಡಿಯಾದ ಪ್ರಸ್ತುತ ಅಧ್ಯಕ್ಷರಾದ ಡಾ. ಪದ್ಮಮಾಲಿನಿ ಮಹೇಂದ್ರದಾಸ್ ಅವರು ಈ ಕುರಿತು. “ಯುವಿಯೈಟಿಸ್‌ ನಿಂದ ಉಂಟಾಗುವ ತಪ್ಪಿಸಬಹುದಾದ ಕುರುಡುತನವನ್ನು ಕಡಿಮೆ ಮಾಡುವುದೇ ನಮ್ಮ ಮುಖ್ಯ ಗುರಿಯಾಗಿದೆ’ ಎಂದು ತಿಳಿಸಿದ್ದಾರೆ.

ಯುವಿಯೈಟಿಸ್‌ ಸೋಂಕುಗಳು ಆಟೋಇಮ್ಯೂನ್‌ ಕಾಯಿಲೆಗಳಿಗೆ ಸಂಬಂಧಿಸಿರಬಹುದು ಅಥವಾ ಕೆಲವೊಮ್ಮೆ ಯಾವುದೇ ಸ್ಪಷ್ಟ ಕಾರಣವಿಲ್ಲದೆಯೂ ಸಂಭವಿಸಬಹುದು. ಆದರೆ ಆರಂಭಿಕ ಹಂತದ ಪತ್ತೆ ಮತ್ತು ಸೂಕ್ತ ಚಿಕಿತ್ಸೆಯಿಂದ ಹೆಚ್ಚಿನ ಪ್ರಕರಣಗಳಲ್ಲಿ ದೃಷ್ಟಿಯನ್ನು ಉಳಿಸಿಕೊಳ್ಳಬಹುದು ಎಂದು ವೈದ್ಯರು ಒತ್ತಿ ಹೇಳುತ್ತಾರೆ.

ಈ ವಿಶ್ವ ಯುವಿಯೈಟಿಸ್‌ ದಿನದಂದು, ಕಣ್ಣಿನ ಉರಿಯೂತದ ಲಕ್ಷಣಗಳು ಕಂಡುಬಂದರೆ ತಕ್ಷಣವೇ ನೇತ್ರ ತಜ್ಞರನ್ನು ಸಂಪರ್ಕಿಸಲು ನೀವು ಜನಿಕರನ್ನು ಕೋರಲಾಗಿದೆ. ವೈದ್ಯರ ಸಲಹೆ ಇಲ್ಲದೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವುದನ್ನು ವಿಶೇಷವಾಗಿ ಸ್ವೀರಾ ಕಣ್ಣಿನ ಹನಿಗಳು ಅಥವಾ ಮಾತ್ರೆಗಳನ್ನು ಬಳಸುವುದನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು ಮತ್ತು ಯಾವುದೇ ಅಡ್ಡಪರಿಣಾಮಗಳನ್ನು ತಡೆಗಟ್ಟಲು ವಿಶೇಷವಾಗಿ ಪದೇ ಪದೇ ಮರುಕಳಿಸುವ ಪ್ರಕರಣಗಳಲ್ಲಿ ನಿಯಮಿತವಾಗಿ ಕಣ್ಣಿನ ತಪಾಸಣೆಗಳನ್ನು ಮಾಡಿಸಿಕೊಳ್ಳಲು ಸಲಹೆ ನೀಡಲಾಗಿದೆ.

-ಗ್ರೂಪ್ ಕ್ಯಾಪ್ಟನ್ ಎಸ್. ಕೆ. ಮಿತ್ತಲ್ ವಿಎಎಂ

ಸಿ.ಇ.ಒ (CEO) ನಾರಾಯಣ ನೇತ್ರಾಲಯ